ಸುಮ್ಮನಾಗಿಲ್ಲ ರೈತರು! ಬುಲ್ಡೋಜರ್ ಸಮೇತ ಶಂಭು ಗಡಿಯತ್ತ ಅನ್ನದಾತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಿಂಚಣಿ ಯೋಜನೆ, ಬೆಂಬಲ ಬೆಲೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ರೈತರು ದೆಹಲಿ ಚಲೋ ಆರಂಭಿಸಿದ್ದು, ಇದೀಗ ತೀವ್ರ ಸ್ವರೂಪ ಪಡೆಯುತ್ತಿದೆ.

ಕೇಂದ್ರ ಸರ್ಕಾರ ರೈತರ ಪ್ರತಿಭಟನೆ ತಡೆಯಲು ಶಂಭು ಗಡಿಯಲ್ಲಿ ಕಾಂಟ್ರಿಕ್ ಬ್ಲಾಕ್‌ಗಳ ಗೋಡೆ, ಬ್ಯಾರಿಕೇಡ್ ಹಾಗೂ ರಸ್ತೆಗೆ ರಾಡ್‌ಗಳನ್ನು ಹೊಡೆಯಲಾಗಿದೆ.

 ಇದನ್ನು ದಾಟಿ ಹೋಗಲು ರೈತರು ಮುಂದಾಗಿದ್ದು, ಹೈಡ್ರಾಲಿಕ್ ಕ್ರೇನ್, ಜೆಸಿಬಿ ಹಾಗೂ ಭಾರೀ ವಾಹನಗಳ ಜೊತೆ ಶಂಭು ಗಡಿಯತ್ತ ಆಗಮಿಸುತ್ತಿದ್ದಾರೆ.

ಎರಡು ದಿನಗಳಿಂದ ದೆಹಲಿ ಚಲೋ ಯಾತ್ರೆ ಸ್ಥಗಿತವಾಗಿದ್ದು, ಪ್ಲ್ಯಾನ್ ಸಮೇತ ರೈತರು ಪ್ರತಿಭಟನೆಗೆ ವಾಪಾಸಾಗಿದ್ದಾರೆ. ಇದರ ವಿಡಿಯೋಗಳ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!