Saturday, September 27, 2025

ಜೆಸಿಬಿ-ಕೆಎಸ್ಆರ್’ಟಿಸಿ ಬಸ್ ನಡುವೆ ಭೀಕರ ಅಪಘಾತ: 13 ಮಂದಿಗೆ ಗಾಯ

ಹೊಸದಿಗಂತ ಮಡಿಕೇರಿ:

ಮಡಿಕೇರಿ-ಕುಶಾಲನಗರ ಹೆದ್ದಾರಿಯಲ್ಲಿ ಜೆಸಿಬಿ-ಸಾರಿಗೆ ಬಸ್ ನಡುವೆ ಅಪಘಾತ ಸಂಭವಿಸಿದ್ದು, 13 ಮಂದಿ ಗಾಯಗೊಂಡಿದ್ದಾರೆ.


ಕುಶಾಲನಗರದಿಂದ ಮಡಿಕೇರಿಗೆ ತೆರಳುತ್ತಿದ್ದ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮಾದಾಪಟ್ಟಣ ಬಳಿ ಜೆಸಿಬಿಗೆ ಡಿಕ್ಕಿಯಾಗಿದೆ.


ಈ ಸಂದರ್ಭ ಕುಶಾಲನಗರದಿಂದ‌ ಮಡಿಕೇರಿಯ ದಸರಾ ಕರ್ತವ್ಯಕ್ಕೆ ತೆರಳುತ್ತಿದ್ದ ಏಳು ಮಂದಿ ಹೋಂಗಾರ್ಡ್’ಗಳೂ ಸೇರಿದಂತೆ 13 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಮಾದಾಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.