ಹೊಸದಿಗಂತ ವರದಿ,ವಿಜಯಪುರ:
ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೆ ಪುತ್ರನೊಬ್ಬ ಹತ್ಯೆ ಮಾಡಿದ ಘಟನೆ ನಗರದ ಹಮಾಲರ ಕಾಲೋನಿಯಲ್ಲಿ ನಡೆದಿದೆ.
ಇಲ್ಲಿನ ಮರಳಪ್ಪ ತಳಗೇರಿ (45) ಮೃತಪಟ್ಟ ವ್ಯಕ್ತಿ.
ಮರಳಪ್ಪ ತಳಗೇರಿ ಈತ ದಿನಾಲು ಮದ್ಯೆ ಸೇವಿಸಿ ಬಂದು ಹೆಂಡತಿಯೊಂದಿಗೆ ಜಗಳ ಕಾಯುತ್ತಿರುವುದಕ್ಕೆ ಬೇಸತ್ತು, ಪುತ್ರ ರಾಜು ಎಂಬವನು ತಂದೆಯನ್ನು ಹತ್ಯೆ ಮಾಡಿ, ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.