ಹೊಸದಿಗಂತ, ವರದಿ,ಮಂಗಳೂರು:
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಮೂಡಬಿದಿರೆಯ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದು, ಅವರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಸ್ವಾಗತಿಸಲಾಯಿತು.
ಈ ಸಂದರ್ಭ ಬಿಜೆಪಿ ಜಿಲ್ಲಾ ಅಧ್ಯಕ್ಷಸುದರ್ಶನ್ ಎಂ., ಉಪ ಮೇಯರ್ ಸುನೀತಾ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ರಾಮದಾಸ್ ಬಂಟ್ವಾಳ, ಬ್ಯಾಂಕ್ ಆಫ್ ಬರೋಡದ ಜಿ. ಎಂ. ಗಾಯತ್ರಿ, ಎ.ಜಿ.ಎಂ. ಮದುಸೂದನ್ , ಪ್ರಮುಖರಾದ ರವಿಶಂಕರ್ ಮಿಜಾರ್, ಜಿತೇಂದ್ರ ಕೊಟ್ಟಾರಿ, ಸುನೀಲ್ ಆಳ್ವ, ಕೇಶವ ಕರ್ಕೆರ, ಶ್ರೀಕಾಂತ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.