ಶಂಕಿತ ಉಗ್ರರಿಗೆ ಆರ್ಥಿಕ ನೆರವು: ರತ್ನಗಿರಿಯಲ್ಲಿ ಓರ್ವ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್‌) ಅಧಿಕಾರಿಗಳು ಇಬ್ಬರು ಶಂಕಿತ ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡಿದ್ದ ಆರೋಪದಡಿ ರತ್ನಗಿರಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ.

ಇದೀಗ ಬಂಧಿತರ ಸಂಖ್ಯೆ 4ಕ್ಕೆ ಏರಿದೆ ಎಂದು ಎಟಿಎಸ್‌ ಹೇಳಿಕೆಯಲ್ಲಿ ತಿಳಿಸಿದೆ.

ಎಟಿಎಸ್‌ ತಂಡ ತನಿಖೆಗಾಗಿ ಮತ್ತೊಂದು ರಾಜ್ಯಕ್ಕೆ ತೆರಳಿದೆ. ತನಿಖೆಗೆ ಹಾಜರಾಗಲು ಸೂಚಿಸಿ ಶಂಕಿತನೊಬ್ಬನಿಗೆ ನೋಟಿಸ್‌ ಜಾರಿ ಮಾಡಿದೆ ಎಂದು ತಿಳಿಸಿದೆ.

ಶಂಕಿತ ಉಗ್ರರಾದ ಮೊಹಮ್ಮದ್‌ ಇಮ್ರಾನ್‌ ಮೊಹಮ್ಮದ್‌ ಯೂನುಸ್ ಖಾನ್ (23), ಮೊಹಮ್ಮದ್ ಯೂನುಸ್‌ ಮೊಹಮ್ಮದ್‌ ಯಾಕುಬ್ ಸಕಿ (24) ಅವರಿಗೆ ಆಶ್ರಯ ನೀಡಿದ್ದ ಅಬ್ದುಲ್‌ ಖಾದಿರ್ ದಸ್ತಗೀರ್ ಪಠಾಣ್‌ರನ್ನು ಪುಣೆಯಲ್ಲಿ ಬುಧವಾರವಷ್ಟೇ ಬಂಧಿಸಲಾಗಿತ್ತು.

ರಾಜಸ್ಥಾನದಲ್ಲಿ ನಡೆದಿದ್ದ ಭಯೋತ್ಪಾದನಾ ಕೃತ್ಯವೊಂದರಲ್ಲಿ ಭಾಗಿಯಾಗಿದ್ದರು ಎನ್ನಲಾದ ಖಾನ್‌ ಮತ್ತು ಸಕಿಯನ್ನು ಪುಣೆಯ ಕೊತ್ರುಡ್‌ನಲ್ಲಿ ಜುಲೈ 18ರಂದು ಬಂಧಿಸಲಾಗಿತ್ತು.

ಇಬ್ಬರೂ ಮಧ್ಯಪ್ರದೇಶದ ರತ್ಲಂ ನಿವಾಸಿಗಳಾಗಿದ್ದು, ಗ್ರಾಫಿಕ್‌ ಡಿಸೈನರ್‌ ಆಗಿದ್ದರು. ಇವರ ಬಗ್ಗೆ ಸುಳಿವು ನೀಡಿದವರಿಗೆ ತಲಾ 5 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!