ಆಗುಂಬೆ ಘಾಟ್‌ ನಲ್ಲಿ ಬಿರುಕು: ಘನ ವಾಹನಗಳ ಸಂಚಾರ ನಿಷೇಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
 
ನಿರಂತರ ಮಳೆಯಿಂದ ಆಗುಂಬೆ ಘಾಟ್‌ ರಸ್ತೆಯ ಕೆಲವೆಡೆ ಬಿರುಕುಬಿಟ್ಟ ಕಾರಣ ಭಾರೀ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 169 ಎ ಯ ಉಡುಪಿ ತೀರ್ಥಹಳ್ಳಿ ಮಾರ್ಗದ ಆಗುಂಬೆ ಘಾಟ್ ನ 6, 7, 11ನೇ ತಿರುವಿನಲ್ಲಿ ಸಣ್ಣ ಬಿರುಕು ಹಾಗೂ ಕುಸಿತ ಕಂಡುಬಂದಿರುವುದರಿಂದ ಜು. 27ರಿಂದ ಸೆ. 15 ರವರೆಗೆ ಘನವಾಹನ ಸಂಚಾರ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

ನಾಳೆಯಿಂದ ಘನ ವಾಹನಗಳು ಪರ್ಯಾಯ ರಸ್ತೆಯಾಗಿರುವ ತೀರ್ಥಹಳ್ಳಿ- ಆಗುಂಬೆ- ಶೃಂಗೇರಿ- ಮಾಳಘಾಟ್‌-ಕಾರ್ಕಳ-ಉಡುಪಿ ರಸ್ತೆಯಾಗಿ, ತೀರ್ಥಹಳ್ಳಿ- ಮಾಸ್ತಿಕಟ್ಟೆ- ಸಿದ್ದಾಪುರ- ಕುಂದಾಪುರ- ಉಡುಪಿ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!