ಹೊಸದಿಗಂತ ವರದಿ, ಕೊಪ್ಪಳ:
ಖೋಟಾ ನೋಟು ಚಲಾವಣೆ ಮಾಡಿದ ಐವರನ್ನು ಗಂಗಾವತಿ ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸಪೇಟೆ ಆಜಾದ ನಗರದ ಖಲಂದರ ಖಾನ್ (33), ಸಂಡೂರಿನ ನೂರಮುಸ್ತಫ (56), ಗಜೇಂದ್ರಗಡದ ವಿರೇಶ (43), ಕೆರೂರಿನ ಸರ್ಪರಾಜ್ (43) ಮತ್ತು ಬಿಂಕದಕಟ್ಟೆ ಗ್ರಾಮದ ಅಬ್ದುಲ್ ರಜಾಕ್ (36) ಬಂಧಿತ ಆರೋಪಿಗಳು.
ಬಂಧಿತರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕೊಪ್ಪಳ ರಸ್ತೆಯಲ್ಲಿನ ಸಮರ್ಥ ಬಾರ್ ಮತ್ತು ರೆಸ್ಟೋರೆಂಟಿನಲ್ಲಿ ಮಧ್ಯ ಖರೀದಿ ಮಾಡಲು ಬಂದು ಬೋಟಾನೋಟುಗಳ ಚಲಾವಣೆ ಮಾಡಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ವಿಶೇಷ ತಂಡ ರಚಿಸಿದ ಪೊಲೀಸರು, ಐವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪನ್ನು ಒಪ್ಪಿಕೊಂಡಿದ್ದಾರೆ.