ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಮೂಲದ ರಾಮೇಶ್ವರಂ ಕೆಫೆಯಲ್ಲಿ ಹೈದರಾಬಾದ್ ಆಹಾರ ಸುರಕ್ಷತಾ ಪ್ರಾಧಿಕಾರ ದಾಳಿ ನಡೆಸಿದೆ. ರಾಮೇಶ್ವರಂ ಕೆಫೆ ಬೆಂಗಳೂರಿನಿಂದ ಹುಟ್ಟಿಕೊಂಡ ದಕ್ಷಿಣ ಭಾರತದ ಪ್ರಸಿದ್ಧ ಹೋಟೆಲ್ ಆಗಿದೆ. ಇತ್ತೀಚೆಗೆ ಬೆಂಗಳೂರಿನ ವೈಟ್ಫೀಲ್ಡ್ ಬಳಿಯ ರಾಮೇಶ್ವರಂ ಕೆಫೆಯ ಶಾಖೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಕೆಲವು ದಿನಗಳ ಹಿಂದೆ ರಾಮೇಶ್ವರಂ ಕೆಫೆ ಹೈದರಾಬಾದಿನಲ್ಲೂ ಶಾಖೆಯನ್ನು ತೆರೆದಿತ್ತು.
ತೆಲಂಗಾಣ ಆಹಾರ ಸುರಕ್ಷತಾ ಪ್ರಾಧಿಕಾರದ ಅಧಿಕಾರಿಗಳು ಗುರುವಾರ ರಾಮೇಶ್ವರಂ ಕೆಫೆಯಲ್ಲಿ ಹಲವು ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಏಕೆಂದರೆ ರೆಸ್ಟೋರೆಂಟ್ನಲ್ಲಿ ಲೇಬಲ್ ಇಲ್ಲದೇ ಅವಧಿ ಮೀರಿದ ಆಹಾರವನ್ನು ಬಳಸುತ್ತಿರುವುದು ಪತ್ತೆಯಾಗಿದೆ. ಆಹಾರ ಸುರಕ್ಷತಾ ಪ್ರಾಧಿಕಾರದ ಪ್ರಕಾರ 16,000 ರೂ. ಮೌಲ್ಯದ 100 ಕೆ.ಜಿ ಉದ್ದಿನ ಬೇಳೆ, 10 ಕೆ.ಜಿ ನಂದಿನಿ ಮೊಸರು ಮತ್ತು 8 ಲೀಟರ್ ಅವಧಿ ಮುಗಿದ ಹಾಲು ಈ ಹೋಟೆಲ್ನ ಅಡುಗೆಮನೆಯಲ್ಲಿ ಕಂಡುಬಂದಿದೆ.
ಆಹಾರ ಸುರಕ್ಷತಾ ಅಧಿಕಾರಿಗಳು ಅಡುಗೆಮನೆಯಿಂದ ತಪ್ಪಾಗಿ ಲೇಬಲ್ ಮಾಡಿದ ಇತರ ವಸ್ತುಗಳನ್ನು ಪತ್ತೆ ಮಾಡಿದ್ದಾರೆ. ಆಹಾರ ಸುರಕ್ಷತಾ ಸಚಿವಾಲಯ ಪ್ರಕಟಿಸಿದೆ. ರಾಮೇಶ್ವರಂ ಕೆಫೆಯಲ್ಲಿ 450 ಕೆಜಿ ಲೇಬಲ್ ಇಲ್ಲದ ಅಕ್ಕಿ, 20 ಕೆಜಿ ಬಿಳಿ ಲೇಬಿಯಾ ಮತ್ತು 300 ಕೆಜಿ ಬೆಲ್ಲವನ್ನು ವಶಪಡಿಸಿಕೊಳ್ಳಲಾಗಿದೆ. ರಾಮೇಶ್ವರಂ ಕೆಫೆಯಲ್ಲಿ ಆಹಾರ ನಿರ್ವಹಣೆ ಮಾಡುವವರಿಗೆ ಆರೋಗ್ಯ ಪ್ರಮಾಣಪತ್ರಗಳನ್ನು ನೀಡದಿರುವುದು ಮತ್ತು ಡಸ್ಟ್ಬಿನ್ಗಳನ್ನು ಮುಚ್ಚದಿರುವುದು ಕಂಡುಬಂದಿದೆ.
* Improperly labelled Raw Rice(450Kg), White Lobia (20kg) worth Rs. 26K seized
* Unlabelled Jaggery (300kg) worth Rs. 30k was seized
* Medical Fitness Certificates for Food Handlers not available.
* Dustbins not covered properly with lids.
(2/4)
— Commissioner of Food Safety, Telangana (@cfs_telangana) May 23, 2024
ಇದು ಉದ್ದೇಶ ಪೂರ್ವಕ ದಾಳಿ. ಬೇರೆ ಹೋಟೆಲ್ ಸುರಕ್ಷತಾ ಬಗ್ಗೆ ಒಂದೂ ದಾಳಿಯಾಗಿಲ್ಲ.