ನಾಲ್ಕು ಚಿರತೆಗಳ ಹೆಜ್ಜೆ ಗುರುತು ಪತ್ತೆ

ಹೊಸದಿಗಂತ ವರದಿ ಹಾನಗಲ್ಲ:

ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದ ತೋಟಗಳಲ್ಲಿ ನಾಲ್ಕು ಚಿರತೆಗಳು ಕಾಣಿಸಿಕೊಂಡಿದ್ದು, ರೈತರಲ್ಲಿ ಭಯದ ವಾತಾವರಣ ಸೃಷ್ಟಿಸಿವೆ. ಇದರೊಂದಿಗೆ ಕೂಲಿ ಕಾರ್ಮಿಕರೂ ಕೃಷಿ ಕಾರ್ಯಗಳಿಗೆ ಬರಲು ಹಿಂಜರಿಯುತ್ತಿದ್ದಾರೆ.
ತಾಲೂಕಿನ ಚಿಕ್ಕೇರಿಹೊಸಳ್ಳಿ ಸೇರಿದಂತೆ ಸುತ್ತಲಿನ ನೂರಾರು ಎಕರೆ ಪ್ರದೇಶದಲ್ಲಿ ಸರ್ಕಾರದ ಅರಣ್ಯ ಪ್ರದೇಶವಿದೆ. ಈ ಅರಣ್ಯಕ್ಕೆ ಬಂದು ಒಂದು ತಿಂಗಳಿಂದ ಸುತ್ತಮುತ್ತಲಿನ ನೂರಾರು ಎಕರೆ ಪ್ರದೇಶದ ರೈತರ ಅಡಕೆ, ಮಾವಿನ ತೋಟಗಳಲ್ಲಿ ಮತ್ತು ಗೋವಿನಜೋಳದಲ್ಲಿ ಸಂಚಾರ ಆರಂಭಿಸಿವೆ.

ರಾತ್ರಿ ಸಮಯದಲ್ಲಿ ಮಾತ್ರ ಸಂಚರಿಸುತ್ತಿರುವ ಈ ಚಿರತೆಗಳು, ಜಿಂಕೆ, ನಾಯಿ, ನರಿ ಮುಂತಾದ ಪ್ರಾಣಿಗಳನ್ನು ಬೇಟೆಯಾಡುತ್ತಿವೆ. ಎರಡು ದೊಡ್ಡ ಚಿತರೆಗಳು ಹಾಗೂ ಎರಡು ಸಣ್ಣ ಮರಿಗಳು ಇರುವ ಈ ಗುಂಪು ರಾತ್ರಿ ಸಮಯದಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಹೊಲಗಳಲ್ಲಿ ಹೆಜ್ಜೆ ಗುರುತುಗಳೂ ದೊರೆತಿವೆ. ಚಿರತೆಯ ಓಡಾಟದ ವಿಡಿಯೋವನ್ನು ಈ ಗ್ರಾಮದ ರೈತ ಚಂದ್ರಗೌಡ ಪಾಟೀಲ ಸೆರೆ ಹಿಡಿದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲುಪಿಸಿದ್ದಾರೆ. ಇದನ್ನು ಅರಣ್ಯಾಧಿಕಾರಿಗಳೂ ದೃಢಪಡಿಸಿದ್ದಾರೆ.
ಚಿಕ್ಕೇರಿ ಹೊಸಳ್ಳಿ ಹಾಗೂ ಚಿಕ್ಕನಕಾವಲು ಅರಣ್ಯ ಪ್ರದೇಶದ ಮಧ್ಯೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗಳ ಸೆರೆಗಾಗಿ 2 ದಿನಗಳ ಹಿಂದೆ ಬೋನು ಅಳವಡಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!