ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಜಾಮ್‌ನಗರ ರಾಜ ಸಿಂಹಾಸನದ ಉತ್ತರಾಧಿಕಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅವರನ್ನು ಗುಜರಾತ್‌ನ ರಾಜಪ್ರಭುತ್ವದ ರಾಜ್ಯವಾದ ಜಾಮ್‌ನಗರ ಎಂದೂ ಕರೆಯಲ್ಪಡುವ ನವನಗರದ ಮುಂದಿನ ಜಾಮ್ ಸಾಹೇಬ್ ಎಂದು ಘೋಷಿಸಲಾಗಿದೆ. ಈ ಘೋಷಣೆಯನ್ನು ನವನಗರದ ಮಹಾರಾಜ ಜಾಮ್ ಸಾಹೇಬ್ ಅವರು ಹೇಳಿಕೆಯಲ್ಲಿ ಖಚಿತಪಡಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿ ಜಾಮ್ ಸಾಹೇಬ್ ಪತ್ರ ಬರೆದಿದ್ದು, ದಸರಾ ದಿನದಂದು ಪಾಂಡವರು ವನವಾಸದಿಂದ ವಿಜಯಶಾಲಿಯಾಗಿ ಮರಳಿದರು. ಈ ಶುಭ ಸಂದರ್ಭದಲ್ಲಿ, ನನ್ನ ಸಂದಿಗ್ಧತೆ ಕೊನೆಗೊಂಡಿದೆ. ಅಜಯ್ ಜಡೇಜಾ ಅವರನ್ನು ನನ್ನ ಉತ್ತರಾಧಿಕಾರಿಯನ್ನಾಗಿ ಮಾಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

ಇದೀಗ 85 ವರ್ಷದ ಶತ್ರುಸಲ್ಯಸಿನ್​ಜಿ ತಮಗೆ ಮಕ್ಕಳಿಲ್ಲದ ಕಾರಣ ಉತ್ತರಾಧಿಕಾರಿಯನ್ನು ಹೆಸರಿಬೇಕಾದ ಅನಿವಾರ್ಯತೆ ಎದುರಾಗಿದೆ. ಇದೇ ಕಾರಣಕ್ಕೆ ಅವರು ಈಗಾಗಲೇ ಖ್ಯಾತಿಗಳಿಸಿರುವ ಅಜಯ್ ಜಡೇಜಾ ಅವರನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!