ಐಪಿಎಲ್ ಟಿಕೆಟ್ ಅಕ್ರಮ ಮಾರಾಟ: ಬೆಂಗಳೂರಿನಲ್ಲಿ ನಾಲ್ವರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬೆಂಗಳೂರಿನಲ್ಲಿ ಐಪಿಎಲ್ ಟಿಕೆಟ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದ ಬಳಿಯಲ್ಲಿ ಐಪಿಎಲ್ ಟಿಕೆಟ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಚರಣ್ ರಾಜ್, ಹರ್ಷವರ್ಧನ್ ಸಕ್ಲೇಚ, ವಿನಯ್, ವೆಂಕಟಸಾಯಿ ಎಂಬುದಾಗಿ ಗುರುತಿಸಲಾಗಿದೆ.

10,500 ರೂಪಾಯಿ ನೀಡಿ ಹರ್ಷವರ್ಧನ್ ನಿಂದ ಐಪಿಎಲ್ ಟಿಕೆಟ್ ಅನ್ನು ಚರಣ್ ಖರೀದಿಸಿದ್ದರು. ಈ ಕುರಿತಂತೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಳಿಕ ವಿನಯ್ ಹಾಗೂ ವೆಂಕಟಸಾಯಿ ಬಂಧಿಲಾಗಿತ್ತು. ಆರ್ ಸಿ ಬಿ, ಸಿ ಎಸ್ ಕೆ ಪಂದ್ಯದ ಟಿಕೆಟ್ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ಆಧರಿಸಿ ಇಂದು ದಾಳಿ ನಡೆಸಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!