ದಿನಭವಿಷ್ಯ: ಇಂದು ನಿಮಗೆ ಅನೇಕ ಒತ್ತಡಗಳಿಂದ ಮುಕ್ತಿ, ದೂರ ಪ್ರಯಾಣ ಸಾಧ್ಯತೆ

ಮೇಷ
ನಿಮ್ಮ ಆದರ್ಶದಿಂದ ಇತರರನ್ನು ಬದಲಿಸುವ ಗುರಿ ಹೊಂದಿದ್ದರೆ ಯಶ ಕಾಣಲಾರಿರಿ. ಕೆಲವರನ್ನು ಬಗ್ಗಿಸುವುದು ಅಸಾಧ್ಯ. ಕೌಟುಂಬಿಕ ಒತ್ತಡ ಹೆಚ್ಚು.
ವೃಷಭ
ಕೌಟುಂಬಿಕ ವಿಷಯ ಬದಿಗಿಟ್ಟು, ಸಾಮಾಜಿಕ ಕಾರ್ಯಕ್ಕೆ ಆದ್ಯತೆ ಕೊಡಬೇಕಾದೀತು.  ಮನಸಲ್ಲೇನೋ ಅತೃಪ್ತಿ, ಅಸಮಾಧಾನ.
ಮಿಥುನ
ಯಾವುದೇ ಪರಿಸ್ಥಿತಿಯಲ್ಲಿ ವಾಸ್ತವತೆ ಅರಿಯದೆ ಪ್ರತಿಕ್ರಿಯಿಸ ದಿರಿ. ಅದರಿಂದ ನೀವೇ
ಇಕ್ಕಟ್ಟಿನಲ್ಲಿ ಸಿಲುಕ ಬಹುದು. ತಾಳ್ಮೆಯಿರಲಿ.
ಕಟಕ
ನಿಮಗೆ ಪೂರಕ ದಿನ. ಆರ್ಥಿಕವಾಗಿ ಮತ್ತು ವೃತ್ತಿಯಲ್ಲಿ ನೀವು ಬಯಸಿದ ಬೆಳವಣಿಗೆ. ಕೌಟುಂಬಿಕ ಸಮಸ್ಯೆ ನಿವಾರಣೆ.
ಸಿಂಹ
ಸಕಾರಾತ್ಮಕ ಮನೋಭಾವದಿಂದ ಕಾರ್ಯ ನಿರ್ವಹಿಸಿ. ಇಲ್ಲವಾದರೆ ನಿಮ್ಮ ಕೆಲಸ ಕೆಡುವುದು. ಅದಕ್ಕೆ ಅವಕಾಶ ಕೊಡದಿರಿ.
ಕನ್ಯಾ
ಆರೋಗ್ಯ ಸಮಸ್ಯೆಗೆ  ಕೂಡಲೇ ಪರಿಹಾರ ಕಂಡುಕೊಳ್ಳಿ. ನಿರ್ಲಕ್ಷ್ಯ ಬೇಡ. ಕುಟುಂಬ ಸದಸ್ಯರಿಂದ ಉದ್ವಿಗ್ನ ಸ್ಥಿತಿ ಅನುಭವಿಸುವಿರಿ.
ತುಲಾ
ಸಮಸ್ಯೆಗಳಿಂದ ಕಂಗೆಡುವಿರಿ. ಆದರೆ ನೆನಪಿಡಿ, ಇದೆಲ್ಲ ತಾತ್ಕಾಲಿಕ. ಒಳ್ಳೆ ಕಾಲ ಬರುತ್ತದೆ. ನಿಮ್ಮ ಕಾರ್ಯ ಮಾಡುತ್ತಾ ಹೋಗಿ.
ವೃಶ್ಚಿಕ
ಕಳೆದು ಹೋದ ಕಾರ್ಯಕ್ಕೆ ಪರಿತಪಿಸದಿರಿ. ತಪ್ಪು ಸರಿಪಡಿಸುವುದು ಜಾಣತನ. ಇದು ನಿಮಗಿಂದು ಅನ್ವಯ ವಾಗುವ ಮಾತು.
ಧನು
ನಿಮ್ಮ ಖಾಸಗಿ ವ್ಯವಹಾರ  ಇತರರ ಟೀಕೆಗೆ ಗುರಿಯಾದೀತು. ಅದನ್ನು ಕಡೆಗಣಿಸಿ. ಆಪ್ತೇಷ್ಟರ ಹಿತ ಕಾಯಲು ಆದ್ಯತೆ ನೀಡಿ.
ಮಕರ
ವದಂತಿಗಳಿಗೆ ಕಿವಿಗೊಡದಿರಿ. ಕಿವಿಗೊಟ್ಟರೆ ಮನಶ್ಯಾಂತಿ ಹಾಳು. ಖಾಸಗಿ ಮತ್ತು ವೃತ್ತಿ ಬದುಕಿನ ಮಧ್ಯೆ ಹೊಂದಾಣಿಕೆ ಸಾಽಸಿ.
ಕುಂಭ
ವ್ಯಕ್ತಿಯೊಬ್ಬರು ನಿಮ್ಮ ಬದುಕಿನಲ್ಲಿ ಕುಶಿ ಮತ್ತು ನೋವು ಎರಡನ್ನೂ ತರುವರು.  ಅತಿಯಾದ ಭಾವುಕತೆ ನಿಮಗೇ ಹಾನಿ ತಂದೀತು. ವಿವೇಕದಿಂದಿರಿ.
ಮೀನ
ಕೌಟುಂಬಿಕ ವಿಚಾರ ಇಂದು ಆದ್ಯತೆ ಪಡೆಯುತ್ತದೆ. ಸಾಂಸಾರಿಕ ಶಾಂತಿ ಉಳಿಸಿಕೊಳ್ಳುವುದು ಮುಖ್ಯ. ಸಹನೆಯೂ ಅತ್ಯವಶ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!