ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ರಾಜಕೀಯ ಚದುರಂಗ ಆಟ ಶುರುವಾಗಿದ್ದು,ಎಐಎಡಿಎಂಕೆ ಎನ್ ಡಿಎ ಮೈತ್ರಿಯಿಂದ ಹೊರಬಂದಿದೆ. ಇದೀಗ ಮುಂದಿನ ದಿನಗಳು ಬಿಜೆಪಿಗೆ ಸವಾಲಿನದಾಗಿದ್ದು, ಎಲ್ಲ ರೀತಿ ಜನರನ್ನು ಎದುರಿಸಲು ಸಜ್ಜಾಗಬೇಕಿದೆ’ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.
ರಾಜಕೀಯ ಬದಲಾವಣೆಗೆ ಪಕ್ಷ ಈ ತೊಡಕು ದಾಟುವ ವಿಶ್ವಾಸವಿದೆ.ನಾನು ವೈಯಕ್ತಿಕವಾಗಿ ಜನರನ್ನು ಎದುರಿಸಲು ಸಜ್ಜಾಗಿದ್ದೇನೆ. ಕಾರ್ಯಕರ್ತರು ಕೂಡಾ ಇದಕ್ಕಾಗಿ ಸಿದ್ಧರಾಗಬೇಕಿದ್ದು, ಬದಲಾವಣೆ ತರಲು ಸಜ್ಜಾಗಬೇಕು’ ಎಂದು ಕಿವಿಮಾತು ಹೇಳಿದ್ದಾರೆ.