ಹೊಸದಿಗಂತ ಕಲಬುರಗಿ:
ಎಟಿಎಂ ಕಳ್ಳತನ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳ ಮೇಲೆ ಬೆಳ್ಳಂಬೆಳಗ್ಗೆ ಪೋಲಿಸರು ಫೈರಿಂಗ್ ನಡೆಸಿರುವ ಘಟನೆ ಕಲಬುರಗಿ ನಗರದ ಹೊರವಲಯದ ಬೇಲೂರ್ ಕ್ರಾಸ್ ಇಂಡಸ್ಟ್ರೀಯಲ್ ಏರಿಯಾ ಹತ್ತಿರ ನಡೆದಿದೆ.
ಹರಿಯಾಣ ಮೂಲದ ತಸ್ಲೀಮ್ @ ತಸ್ಸಿ (28) , ಶರೀಫ್ (22) ಎಂಬುವ ಇಬ್ಬರು ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಎಟಿಎಂ ದರೋಡೆ ಮಾಡಲು ಹೊಂಚು ಹಾಕಿ ಕುಳಿತಾಗ ಪೋಲಿಸರಿಂದ ಫೈರಿಂಗ್ ನಡೆಸಲಾಗಿದೆ.
ಕಲಬುರಗಿಯಲ್ಲಿ ಇತ್ತೀಚೆಗೆ ಏ.೯ರಂದು ನಗರದ ಪೂಜಾರಿ ಚೌಕ್ ಹತ್ತಿರ ಎಟಿಎಂ ದರೋಡೆಯಾಗಿದ್ದು,ದರೋಡೆಕೋರರನ್ನು ಸೆರೆಂಡರ್ ಆಗುವಂತೆ ಸೂಚಿಸಲಾಗಿತ್ತು.ಆದರೆ,ಆರೋಪಿಗಳು ಶರಣಾಗದೇ ಪೋಲಿಸರ ಮೇಲೆ ದಾಳಿಗೆ ಮುಂದಾಗಿದ್ದು, ಈ ಹಿಂದೆ ನಡೆದ ಎಟಿಎಂ ದರೋಡೆ ಪ್ರಕರಣದಲ್ಲಿ ಇವರ ಕೈವಾಡವಿದೆ ಎಂಬುದು ಪೋಲಿಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹೆಡ್ ಕಾನ್ಸ್ಟೇಬಲ್ ಮಂಜು, ಫಿರೋಜ್, ರಾಜಕುಮಾರ್ ಮೇಲೆ ಆರೋಪಿಗಳು ದಾಳಿ ಮಾಡಿದ್ದು, ಆತ್ಮರಕ್ಷಣೆಗಾಗಿ ಪಿಎಸ್ಐ ಬಸವರಾಜ ಅವರಿಂದ ರಿಟರ್ನ್ ಫೈರಿಂಗ್ ಮಾಡಲಾಗಿದೆ.ಇನ್ನೂ ಗಾಯಾಳುಗಳನ್ನು ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಸಬ್ ಅರ್ಬನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.