ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಇಂದು ಕೂಡ ಆಲಿಕಲ್ಲು ಸಹಿತ ಮಳೆಯಾಗಲಿದ್ದು, ಜನರೆಲ್ಲ ಬೇಗ ಕೆಲಸ ಮುಗಿಸಿ ಸಂಜೆಗೆ ಮನೆಗೆ ಸೇರುವುದು ಉತ್ತಮವಾಗಿದೆ. ಕೆಲ ಜಿಲ್ಲೆಗಳಲ್ಲಿ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಕೂಡ ಘೋಷಿಸಲಾಗಿದೆ.
ಈ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗುವ ಸಾಧ್ಯತೆ ಇದ್ದು, ಜನ ಸೂಕ್ತ ತಯಾರಿ ಮಾಡಿಕೊಳ್ಳಬೇಕಿದೆ.
ಎಲ್ಲೆಲ್ಲಿ ಮಳೆ?
ಚಿಕ್ಕಮಗಳೂರು
ಹಾಸನ
ಕೊಡಗು
ಮಂಡ್ಯ
ಮೈಸೂರು ( ಆರೆಂಜ್ ಅಲರ್ಟ್)
ಬೆಂಗಳೂರು ನಗರ
ಬೆಂಗಳೂರು ಗ್ರಾಮೀಣ
ಕೋಲಾರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ತುಮಕೂರು ( ಯೆಲ್ಲೋ ಅಲರ್ಟ್)



