ಹೊಸದಿಗಂತ ಡಿಜಿಟಲ್ ಡೆಸ್ಕ್:
2024ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್ಗಳಿಂದ ಸೋಲಿಸಿ ಭಾರತ 11 ವರ್ಷಗಳ ಬಳಿಕ ಐಸಿಸಿ ಟ್ರೋಫಿಯನ್ನು ಗೆದ್ದಿತು. 2024ರ ಜೂನ್ 29ರಂದು ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದ ಈ ರೋಚಕ ಫೈನಲ್ ಪಂದ್ಯವನ್ನು ನೆನಪಿಸಿಕೊಂಡ ಭಾರತ ನಾಯಕ ರೋಹಿತ್ ಶರ್ಮಾ, ಅಕ್ಷರ್ ಪಟೇಲ್ರ ಬೆಂಬಲದ ಇನಿಂಗ್ಸ್ ಹೋರಾಟದ ದಿಕ್ಕನ್ನೇ ಬದಲಾಯಿಸಿತು ಎಂದು ಹೇಳಿದ್ದಾರೆ.
ಜಿಯೋಸ್ಟಾರ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ರೋಹಿತ್, ಆರಂಭಿಕ 5 ಓವರ್ಗಳಲ್ಲಿ ಭಾರತ 34/3 ರನ್ಗಳಿಗೆ ಕುಸಿತಗೊಂಡಿತ್ತು. ಈ ಸಂದರ್ಭದಲ್ಲಿ ಅಕ್ಷರ್ ಪಟೇಲ್ರನ್ನು 5ನೇ ಕ್ರಮಾಂಕದಲ್ಲಿ ಕಳಿಸುವ ತೀರ್ಮಾನ ದ್ರಾವಿಡ್ರ ತಂತ್ರಜ್ಞತೆಗೆ ಸಲ್ಲುವ ಹೆಮ್ಮೆ ಎಂದ ರೋಹಿತ್, ಅಕ್ಷರ್ 31 ಎಸೆತಗಳಲ್ಲಿ 47 ರನ್ ಬಾರಿಸಿ ಪಂದ್ಯವನ್ನು ಸಮತೋಲನಕ್ಕೆ ತಂದರು ಎಂದರು. ವಿರಾಟ್ ಕೊಹ್ಲಿಯ 76 ರನ್ಗಳ ಜವಾಬ್ದಾರಿಯುತ ಆಟ ಮತ್ತು ಶಿವಂ ದುಬೆನ ಕೊಡುಗೆಯಿಂದ ಭಾರತ 176/7 ರನ್ ಗಳಿಸಿತು.
ಬೌಲಿಂಗ್ನಲ್ಲಿ ಬುಮ್ರಾ, ಅರ್ಶದೀಪ್ ಹಾಗೂ ಪಾಂಡ್ಯ ಅತ್ಯುತ್ತಮ ಪ್ರದರ್ಶನ ನೀಡಿದರು. ಪಂತ್ ಪಂದ್ಯ ತಡೆಯುವ ತಂತ್ರದಿಂದ ದಕ್ಷಿಣ ಆಫ್ರಿಕಾದ ಲಯ ಕುಗ್ಗಿತು. ಕೊನೆಗೂ ಭಾರತ 169/8 ರನ್ಗೆ ವಿರೋಧಿ ತಂಡವನ್ನು ನಿರ್ಬಂಧಿಸಿ 7 ರನ್ಗಳ ಜಯಗಳಿಸಿತು.
ರೋಹಿತ್ ಶರ್ಮಾ ಅಕ್ಷರ್ ಪಟೇಲ್ರ 47 ರನ್ಗಳ ಕೊಡುಗೆಯು ಹೆಚ್ಚು ಗಮನಾರ್ಹವಾಗಿತ್ತು. “ಅದು ನಿಜವಾದ ಗೇಮ್ ಚೇಂಜರ್ ಇನಿಂಗ್ಸ್ ಆಗಿತ್ತು,” ಎಂದು ರೋಹಿತ್ ಹೇಳಿದ್ದಾರೆ.