ಪ್ರಶಾಂತ್‌ ಕಿಶೋರ್ ಪ್ರಚಾರಕ್ಕಾಗಿ ನನ್ನ ಬಗ್ಗೆ ಮಾತನಾಡುತ್ತಾರೆ: ನಿತೀಶ್ ಕುಮಾರ್ ತಿರುಗೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಪರಿಸ್ಥಿತಿ ಬಯಸಿದಲ್ಲಿ ಅವರು ಮತ್ತೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧರಿದ್ದಾರೆ ಎಂಬ ಪ್ರಶಾಂತ್ ಕಿಶೋರ್ ಹೇಳಿಕೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಶುಕ್ರವಾರ ತಿರಗೇಟು ನೀಡಿದ್ದಾರೆ.
“ದಯವಿಟ್ಟು ಅವನ ಬಗ್ಗೆ ನನ್ನನ್ನು ಕೇಳಬೇಡಿ.  ಚುನಾವಣಾ ತಂತ್ರಜ್ಞರು ಪ್ರಚಾರಕ್ಕಾಗಿ ಹಾಗೆಲ್ಲ ಮಾತನಾಡುತ್ತಾರೆ. ಅವನು ಮಾತನಾಡುತ್ತಲೇ ಇರುತ್ತಾನೆ. ತಮ್ಮ ಸ್ವಂತ ಪ್ರಚಾರಕ್ಕಾಗಿ ಅವರು ಏನು ಬೇಕಾದರೂ ಹೇಳಬಹುದು, ಅವರು ಹೇಳುವುದಕ್ಕೆಲ್ಲ ನಾವು ಹೆದರುವುದಿಲ್ಲ. ನಾನು ಅವರನ್ನು ಗೌರವಿಸುವ ಸಮಯವಿತ್ತು. ಈಗ ಅವರ ಮನಸ್ಸಿನಲ್ಲಿ ಏನಿದೆ ಎಂದು ನನಗೆ ತಿಳಿದಿಲ್ಲ, ”ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
“ ಪ್ರಶಾಂತ್‌ ಕಿಶೋರ್‌ ತುಂಬಾ ಚಿಕ್ಕವನು. ನಾನು ಗೌರವಿಸಿದವರು ನನ್ನೊಂದಿಗೆ ಹಲವು ಬಾರಿ ಅನುಚಿತವಾಗಿ ವರ್ತಿಸಿದ್ದಾರೆ, ಅದು ನಿಮಗೆಲ್ಲರಿಗೂ ಗೊತ್ತು. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ನಿತೀಶ್ ತಿರುಗೇಟು ನೀಡಿದರು.
ಬಿಹಾರದಲ್ಲಿ ಪಾದಯಾತ್ರೆ ನಡೆಸುತ್ತಿರುವ ಕಿಶೋರ್, ಈ ಮೂಲಕ ಸಕ್ರಿಯ ರಾಜಕೀಯಕ್ಕೆ ಪೂರ್ವಭಾವಿ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಮಾತನಾಡಿದ್ದ ಕಿಶೋರ್‌, ಬಿಹಾರ ಸಿಎಂ ನಿತೇಶ್‌  ಕುಮಾರ್ ಜೆಡಿಯು ಸಂಸದ ಮತ್ತು ರಾಜ್ಯಸಭೆಯ ಉಪಸಭಾಪತಿ ಹರಿವಂಶ್‌ ಅವರ ಮೂಲಕ ಬಿಜೆಪಿಯೊಂದಿಗೆ ಸಂವಹನವನ್ನು ತೆರೆದಿಟ್ಟಿದ್ದಾರೆ ಎಂದು ಆರೋಪಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!