HEALTH| ಉಗುರು ಬೆಚ್ಚಗಿನ ನೀರಿನಲ್ಲಿ ಈ ಪದಾರ್ಥಗಳನ್ನು ಬೆರೆಸಿ ಕುಡಿಯಿರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತೀಯ ಅಡುಗೆಮನೆಯಲ್ಲಿ ಆರೋಗ್ಯಕರವೆಂದು ಪರಿಗಣಿಸಲಾದ ಅನೇಕ ವಸ್ತುಗಳು ಇವೆ. ಚಕ್ಕೆ, ಲವಂಗ, ಜೀರಿಗೆ ಮತ್ತು ಕೊತ್ತಂಬರಿಗಳನ್ನು ಸಾಮಾನ್ಯವಾಗಿ ಆಹಾರದ ರುಚಿಯನ್ನು ಹೆಚ್ಚಿಸಲು ಮಸಾಲೆಗಳಾಗಿ ಬಳಸಲಾಗುತ್ತದೆ. ಆದರೆ ಆಯುರ್ವೇದದಲ್ಲಿ ಈ ಪದಾರ್ಥಗಳನ್ನು ಔಷಧವಾಗಿ ಬಳಸುತ್ತಾರೆ ಎಂಬುದು ನಿಮಗೆ ಗೊತ್ತಾ? ಇದು ದೇಹವನ್ನು ಅನೇಕ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಕಾಲೋಚಿತ ರೋಗಗಳಿಗೆ ತುತ್ತಾಗುವ ಅಪಾಯ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆರೋಗ್ಯದ ಬಗ್ಗೆ ನೀವು ವಿಶೇಷ ಗಮನ ಹರಿಸಬೇಕು. ಇವೆಲ್ಲವನ್ನು ಬಳಸಿ ಕಷಾಯ ತಯಾರಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಮಲಬದ್ಧತೆ: ನೀವು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದರೆ ರಾತ್ರಿ ಮಲಗುವ ಮುನ್ನ ಚಕ್ಕೆ, ಲವಂಗ, ಜೀರಿಗೆ ಮತ್ತು ಕೊತ್ತಂಬರಿ ಕಾಳ್ನು ಬೇಯಿಸಿ ಬೆಚ್ಚಗಾದ ಬಳಿಕ ಕುಡಿಯಬಹುದು. ಇದು ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ. ಅಜೀರ್ಣದಿಂದ ಪರಿಹಾರ ನೀಡುತ್ತದೆ.

ತೂಕ ಇಳಿಸಿಕೊಳ್ಳಲು: ನೀವು ತೂಕ ಇಳಿಸಿಕೊಳ್ಳಲು ಯೋಚಿಸುತ್ತಿದ್ದರೆ, ಇವೆಲ್ಲವನ್ನು ಬೆರೆಸಿದ ಬೆಚ್ಚಗಿನ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹದ ಕೊಬ್ಬನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿ: ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು, ನೀವು ಈ ದೇಸಿ ಪಾನೀಯವನ್ನು ಸೇವಿಸಬಹುದು.

ನೆಗಡಿ ಮತ್ತು ಕೆಮ್ಮು: ಚಳಿಗಾಲದಲ್ಲಿ ಬರುವ ಸಮಸ್ಯೆಗಳಲ್ಲಿ ನೆಗಡಿ ಮತ್ತು ಕೆಮ್ಮು ಕೂಡ ಒಂದು. ಈ ಸಮಸ್ಯೆಯನ್ನು ತಪ್ಪಿಸಲು, ನೀವು ಪ್ರತಿದಿನ ಚಕ್ಕೆ, ಲವಂಗ, ಜೀರಿಗೆ ಮತ್ತು ಕೊತ್ತಂಬರಿ ಕಾಳಿನ ಕಷಾಯವನ್ನು ಕುಡಿಯಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!