WEATHER | ಇಂದು ಕರ್ನಾಟಕದ ಕರಾವಳಿ, ಕೊಡಗು, ಶಿವಮೊಗ್ಗ ಸೇರಿ ಹಲವೆಡೆ ಭಾರಿ ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕರ್ನಾಟಕಕ್ಕೆ ಮುಂಗಾರು ಪ್ರವೇಶವಾಗಿದೆ. ಇಂದು ಕರ್ನಾಟಕದ ಕರಾವಳಿ, ಕೊಡಗು, ಶಿವಮೊಗ್ಗ, ಹಾಸನ ಹಾಗೂ ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರೆಡ್ ಅಲರ್ಟ್​ ಘೋಷಿಸಲಾಗಿದೆ. ಬಾಗಲಕೋಟೆ, ಉತ್ತರ ಕನ್ನಡ, ಚಾಮರಾಜನಗರ, ಮೈಸೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.

ತುಮಕೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್​ಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಮುಂದುವರೆಯಲಿದ್ದು, ಸಾಧಾರಣ ಮಳೆಯಾಗಲಿದೆ.

ಭಾಗಮಂಡಲ, ನಾಪೋಕ್ಲು, ಮುಲ್ಕಿ, ಸುಳ್ಯ, ಧರ್ಮಸ್ಥಳ, ಮಂಗಳೂರು, ಗೇರುಸೊಪ್ಪ, ಉಪ್ಪಿನಂಗಡಿ, ಆಗುಂಬೆ, ಸೋಮವಾರಪೇಟೆಯಲ್ಲಿ ಭಾರಿ ಮಳೆಯಾಗಿದೆ. ಮಾಣಿ, ನಿಪ್ಪಾಣಿ, ಕಾರ್ಕಳ, ಪಣಂಬೂರು, ಕದ್ರಾ, ಹೊನ್ನಾವರ, ಅಣ್ಣಿಗೆರೆ, ಪೊನ್ನಂಪೇಟೆ, ಕಳಸ, ಕುಶಾಲನಗರ, ಬಂಡೀಪುರ, ಜಯಪುರ, ಶೃಂಗೇರಿ, ಹಾರಂಗಿ, ಕೊಪ್ಪ, ನರಗುಂದ, ಕಾರವಾರ, ಚಿಕ್ಕೋಡಿ, ದೇವರಹಿಪ್ಪರಗಿ, ಎಚ್​ಡಿ ಕೋಟೆ, ಹುಣಸೂರು, ಅರಕಲಗೂಡು, ಬಾಳೆಹೊನ್ನೂರಿನಲ್ಲಿ ಮಳೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!