ಹೊಸ ದಿಗಂತ ವರದಿ,ಅಂಕೋಲಾ:
ತಾಲೂಕಿನಲ್ಲಿ ಮಳೆಯ ಅವಾಂತರಗಳು ಮತ್ತೆ ಆರಂಭವಾಗಿದ್ದು ಮುಂಗಾರು ಪೂರ್ವದ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು ವ್ಯಕ್ತಿಯೋರ್ವ ಮೃತ ಪಟ್ಟ ಘಟನೆ ಗಂಗಾವಳಿ ನದಿ ತೀರದ ಉಳುವರೆಯಲ್ಲಿ ಸೋಮವಾರ ಸಂಜೆ ನಡೆದಿದೆ.
ಉಳುವರೆ ನಿವಾಸಿ ತಮ್ಮಾಣಿ ಅನಂತ ಗೌಡ(75) ಎನ್ನುವವರು ಮೃತ ದುರ್ದೈವಿಯಾಗಿದ್ದು ಸಿಡಿಲು ಬಡಿದ ಪರಿಣಾಮವಾಗಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ತಾಲೂಕಿನ ಶಿರೂರು, ಉಳುವರೆ ಭಾಗದಲ್ಲಿ ಸೋಮವಾರ ಸಂಜೆ ಗುಡುಗು ಸಿಡಿಲಿನಿಂದ ಕೂಡಿದ ಭಾರೀ ಮಳೆ ಸುರಿದಿದ್ಧು ಕಳೆದ ವರ್ಷ ಮಳೆಗಾಲದಲ್ಲಿ ಗುಡ್ಡ ಕುಸಿತದ ದುರಂತದಿಂದಾಗಿ ಮನೆಗಳು ಕುಸಿದು ಸಾವು ನೋವುಗಳು, ಅಪಾರ ಪ್ರಮಾಣದಲ್ಲಿ ಆಸ್ತಿ ಪಾಸ್ತಿಗಳ ಹಾನಿಗೆ ಕಾರಣವಾಗಿದ್ದ ಉಳುವರೆಯಲ್ಲಿ ಮುಂಗಾರು ಪೂರ್ವದಲ್ಲೇ ಸಿಡಿಲು ಬಡಿದು ವ್ಯಕ್ತಿ ಮೃತ ಪಟ್ಟಿರುವುದು ಆಘಾತಕ್ಕೆ ಕಾರಣವಾಗಿದೆ.