ಹೊಸದಿಗಂತ ವರದಿ ಹಾಸನ
ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆ ಇದೀಗ ಕೊಂಚ ಬಿಡುವೆ ನೀಡಿದೆ. ಇಷ್ಟು ದಿನಗಳ ಕಾಲ ಸುರಿದ ಮಳೆಗೆ ಒಟ್ಟು ೫೮ ಮನೆ ಕುಸಿದು ಬಿದ್ದಿದ್ದು, ೪ ಮನೆಗಳು ಸಂಪೂರ್ಣ ಕುಸಿದು ಬಿದ್ದಿವೆ.
ಸಕಲೇಶಪುರ ಉಪ ವಿಭಾಗ ವ್ಯಾಪ್ತಿಗೆ ನಾಲ್ಕು ತಾಲೂಕುಗಳು ಒಳಪಾಡುತ್ತವೆ. ಕಳೆದ ಶುಕ್ರವಾರದಿಂದ ಕೊಂಚ ಮಳೆರಾಯ ಕೊಂಚ ಬಿಡುವು ನೀಡಿದೆ. ಸಕಲೇಶಪುರ ಉಪವಿಭಾಗ ವ್ಯಾಪ್ತಿಯ ಆಲೂರು, ಅರಕಲಗೂಡು, ಬೇಲೂರಿನಲ್ಲಿ ಭಾರಿ ಮಳೆಗೆ ವಿವಿಧ ರೀತಿಯ ಅವಘಡಗಳು ಸಂಭವಿಸಿದೆ. ಬಿರುಗಾಳಿ ಸಹಿತ ಸುರಿದ ಮಳೆಗೆ ಅರಕಲಗೂಡು ತಾಲ್ಲೂಕಿನಲ್ಲಿ ೪ ಮನೆ ಸಂಪೂರ್ಣ ಕುಸಿದು, ೧೮ ಮನೆಗಳಿಗೆ ಹಾನಿ ಯಾಗಿದೆ. ಸಕಲೇಶಪುರ ತಾಲ್ಲೂಕಿನಲ್ಲಿ ೧೯ ಮನೆಗಳಿಗೆ ಹಾನಿಯಾಗಿದೆ. ಆಲೂರು ತಾಲ್ಲೂಕಿನಲ್ಲಿ ೧೦ ಮನೆಗಳಿಗೆ ಹಾನಿಯಾಗಿದ್ದರೆ, ಬೇಲೂರು ತಾಲ್ಲೂಕಿನಲ್ಲಿ ೧೧ ಮನೆಗಳಿಗೆ ಹಾನಿಯಾಗಿದೆ.
ಅರಕಲಗೂಡು ತಾಲ್ಲೂಕಿನಲ್ಲಿ ೩, ಸಕಲೇಶಪುರ ತಾಲ್ಲೂಕಿನಲ್ಲಿ ೧, ಬೇಲೂರು ತಾಲ್ಲೂಕಿನಲ್ಲಿ ೨, ಆಲೂರು ತಾಲ್ಲೂಕಿನಲ್ಲಿ ೧ ಸೇರಿ ನಾಲ್ಕೂ ನಾಲ್ಕು ತಾಲ್ಲೂಕುಗಳಲ್ಲಿ ೭ ಜಾನುವಾರು ಜೀವ ಕಳೆದು ಕೊಂಡಿವೆ. ಎನ್ಡಿಆರ್ಎಫ್ಡಿಆರ್ಎಫ್ ಗೈಡ್ಲೈನ್ಸ್ ಪ್ರಕಾರ ಪರಿಹಾರ ೩೭,೫೦೦ ಪರಿಹಾರ ನೀಡಲಾಗುತ್ತಿದೆ. ಮನೆಯ ತಡೆಗೋಡೆಗಳು ಕುಸಿದಿದ್ದರೆ ಪುರಸಭೆ ಜೊತೆ ಸೇರಿ ಪರಿಹಾರ ಒದಗಿಸಲಾಗುತ್ತಿದೆ. ಇದುವರೆಗೂ ಯಾವುದೇ ಪ್ರಾಣ ಹಾನಿ ಆಗಿಲ್ಲ. ಸಕಲೇಶಪುರ ಪಟ್ಟಣದಲ್ಲಿ ಹೋಟೆಲ್ ಗೋಡೆ ಕುಸಿದು ನಾಲ್ಕು ಮಂದಿಗೆ ಗಾಯಗಳಾಗಿವೆ. ವೈದ್ಯರ ವರದಿ ತರಿಸಿಕೊಂಡು ಪರಿಹಾರ ನೀಡಲಾಗುವುದು.
ಎನ್ಡಿಆರ್ಎಫ್ಎಸ್ ಎಸ್ಡಿಆರ್ಎಫ್ ಗೈಡ್ಲೈನ್ಸ್ ಪ್ರಕಾರ ಮನೆಗಳು ಸಂಪೂರ್ಣ ಕುಸಿದಿದ್ದರೆ ೧ ಲಕ್ಷದ ೨೦ ಸಾವಿರ, ಹಾನಿಯಾಗಿದ್ದರೆ ೬,೫೦೦ ರೂ ಪಾವತಿ ಮಾಡಲಾಗುವುದು.
ಶಕಲೇಶಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿ ಕೂಡಲೇ ಮಣ್ಣು ತೆರವುಗೊಳಿಸಿ ವಾಹನಗಳ ಓಡಾಟಕ್ಕೆ ಅಡ್ಡಿಯಾಗದಂತೆ ಕ್ರಮ ಕೈಗೊಂಡಿದ್ದೇವೆ. ರಸ್ತೆಗಳಿಗೆ ಮರಗಳು ಬಿದ್ದ ಕೂಡಲೇ ತೆರವುಗೊಳಿಸಲಾಗುತ್ತಿದೆ. ವಿದ್ಯುತ್ ಕಂಬಗಳು ಬಿದ್ದು ಕರೆಂಟ್ ಕಟ್ ಆದರೆ ತುರ್ತಾಗಿ ಸ್ಪಂದಿಸಲು ವಿದ್ಯುತ್ ಇಲಾಖೆಗೆ ಸೂಚನೆ ನೀಡಲಾಗಿದೆ ವಿದ್ಯುತ್ ರೆಖೆಯಲ್ಲಿ ೨೭ ಕಂಟ್ರೋಲ್ ರೂಂ. ತೆರೆದಿದ್ದಾರೆ. ಬಿಸಿಲೆ, ಹೆತ್ತೂರು ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು, ಈಗಾಗಲೇ ದುರಸ್ತಿ ಕಾರ್ಯ ನಡೆಯುತ್ತಿದೆ.