ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆಗಾಲದಲ್ಲಿ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಕೈಲಿರುತ್ತದೆ. ಹಾಗಾಗಿ ಉತ್ತಮ ಆಹಾರ ಸೇವಿಸುವುದರ ಜೊತೆಗೆ ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಕೂಡ.
ಹಾಗಾಗಿ ಮಳೆಗಾಲದಲ್ಲಿ ಅನಾರೋಗ್ಯ ಸಮಸ್ಯೆಗಳನ್ನು ದೂರ ಇಡಲು ಈ ಪಾನೀಯಗಳನ್ನು ಕುಡಿಯುವುದು ಹೆಚ್ಚು ಉಪಕಾರಿ.
1. ತುಳಸಿ, ಶುಂಠಿ ಮಿಶ್ರಿತ ಪಾನೀಯ
ಬೇಕಾಗುವ ಸಾಮಗ್ರಿಗಳು:
* ತುಳಸಿ ಎಲೆ
* ಶುಂಠಿ
* ಕಾಳು ಮೆಣಸಿನ ಪುಡಿ
* ಅರಿಶಿಣ ಪುಡಿ
* ಜೇನು
ಮಾಡುವ ವಿಧಾನ:
ಜೇನು ಹೊರತು ಪಡಿಸಿ ಉಳಿದೆಲ್ಲಾ ಸಾಮಗ್ರಿಗಳನ್ನು 2 ಲೋಟ ನೀರಿಗೆ ಹಾಕಿ ಕುದಿಸಿ. ಆ ನೀರು ಒಂದು ಲೋಟಕ್ಕೆ ಬಂದಾಗ ಜೇನು ಸೇರಿಸಿ ಕುಡಿಯಬೇಕು.
2. ಚಕ್ಕೆ, ಶುಂಠಿ ಮಿಶ್ರಿತ ಟೀ
ಮಳೆಗಾಲದಲ್ಲಿ ಸಾಮಾನ್ಯವಾಗಿ ನಾವೆಲ್ಲರು ಕುಡಿಯುವ ಟೀ ಬದಲಿಗೆ ಈ ಬಗೆಯ ಟೀ ಒಳ್ಳೆಯದು.
* ನೀರಿಗೆ ಶುಂಠಿ, ಚಕ್ಕೆ ಹಾಕಿ ಕುದಿಸಿ. ಅದು ಸ್ವಲ್ಪ ತಣ್ಣಗಾದ ಬಳಿಕ ಜೇನು ಸೇರಿಸಿ ಕುಡಿಯಿರಿ.
3. ಮಸಾಲೆ ಟೀ
* ಸಾಮಾನ್ಯವಾಗಿ ಟೀ ಮಾಡುವಾಗ ಅದಕ್ಕೆ ಸ್ವಲ್ಪ ಶುಂಠಿ ಅಥವಾ ಚಕ್ಕೆ ಹಾಕಿ ಕುದಿಸಿ ಮಾಡುವ ಟೀ ಕುಡಿಯುವುದು ಕೂಡ ಒಳ್ಳೆಯದು.
4. ಪುದೀನಾ ಟೀ
* ಬ್ಲ್ಯಾಕ್ ಟೀ ಮಾಡಿ ಅದಕ್ಕೆ ಒಂದು ಎಸಳು ಪುದೀನಾ ಹಾಗೂ ಸ್ವಲ್ಪ ನಿಂಬೆ ರಸ ಹಾಕಿ ಕುಡಿದರೆ ಉತ್ತಮ ಆರೋಗ್ಯದ ಜೊತೆಗೆ ಜೀರ್ಣಕ್ರಿಯೆ ಕೂಡ ಚೆನ್ನಾಗಿರುತ್ತದೆ.