ದಿನಭವಿಷ್ಯ | ಈ ರಾಶಿಯವರಿಗೆ ಇಂದು ಅದೃಷ್ಟವು ಬೆಂಬಲ ನೀಡಲಿದೆ

ಮೇಷ
ವೃತ್ತಿಯಲ್ಲಿನ ಸಮಸ್ಯೆ ಪರಿಹರಿಸಲು ಮುಂದಾಗಿ. ಅದನ್ನು ಹಾಗೇ ಬಿಟ್ಟುಬಿಡಬೇಡಿ. ಕೆಲವು ಕಠಿಣ ಕ್ರಮ ತೆಗೆದುಕೊಳ್ಳಲು ಹಿಂಜರಿಯದಿರಿ.

ವೃಷಭ
ಕೌಟುಂಬಿಕ ಒತ್ತಡದಿಂದ ಭಿನ್ನಮತ ಏರ್ಪಟ್ಟೀತು. ಸಂಧಾನದಿಂದ  ಅದನ್ನು ಪರಿಹರಿಸಿ. ವ್ಯವಹಾರದಲ್ಲಿ ಅಡ್ಡಿ ಒದಗಿಬರಬಹುದು. ತಾಳ್ಮೆಯಿರಲಿ.

ಮಿಥುನ
ಚಾಲನೆಯಲ್ಲಿ ಇಂದು ಎಚ್ಚರ ವಹಿಸಿ. ಅತಿವೇಗ ಒಳಿತಲ್ಲ.  ತುಸು ದೇಹಾಲಸ್ಯ ಕಾಡಬಹುದು. ಕೌಟುಂಬಿಕ ಭಿನ್ನಮತ ನಿವಾರಣೆ.

ಕಟಕ
ನಿಮ್ಮ ಮಾತುಗಳು ಸಂಯಮದಿಂದಿರಲಿ. ಅಪಾರ್ಥ ಸೃಷ್ಟಿಸದಂತೆ ನೋಡಿಕೊಳ್ಳಿ. ಇಲ್ಲವಾದರೆ ಮಾತಿನಿಂದ  ವಾಗ್ವಾದ ಉಂಟಾದೀತು.

ಸಿಂಹ
ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ಕೌಟುಂಬಿಕ ಭಿನ್ನಮತ ಸೌಹಾರ್ದ ಪರಿಹಾರ ಪ್ರಮುಖ ಕಾರ್ಯದಲ್ಲಿ ಅವಸರ ಬೇಡ, ಸಂಯಮ ವಹಿಸಿರಿ.

ಕನ್ಯಾ
ಸಣ್ಣಪುಟ್ಟ ಜಗಳಗಳಿಂದ ದೂರವಿರಿ. ಹೆಚ್ಚುವರಿ ಕೆಲಸದ ಹೊಣೆಗಾರಿಕೆ. ಒತ್ತಡ ಹೆಚ್ಚಿದರೂ, ಧನಲಾಭವೂ ಇದೆ. ಉದ್ಯೋಗ ಬದಲಾವಣೆ ಅವಕಾಶವಿದೆ.

ತುಲಾ
ಮನೆಯಲ್ಲಿ ಇತರರ ಅಭಿಪ್ರಾಯಕ್ಕೂ ಬೆಲೆ ಕೊಡಿ. ಇದರಿಂದ ಸಂಭವನೀಯ ಭಿನ್ನಮತ ತಪ್ಪಿಸ ಬಹುದು. ನಿಮ್ಮ ಹಠಮಾರಿ ಧೋರಣೆ ಬಿಟ್ಟುಬಿಡಿ.

ವೃಶ್ಚಿಕ
ಕೆಲಸದ ಕ್ಷೇತ್ರದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣ. ಸಂಘರ್ಷ ನಡೆದೀತು. ಮನೆಯಲ್ಲಿನ ಶಾಂತ ಪರಿಸರದಿಂದ ಮನಸ್ಸು ನಿರಾಳವಾಗುವುದು.

ಧನು
ಸಮಯದೊಳಗೆ ನಿಮ್ಮ ಕೆಲಸ ಮುಗಿಸಲು ಕಷ್ಟ ಪಡುವಿರಿ. ಮಾನಸಿಕ ಒತ್ತಡ ಹೆಚ್ಚು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಕೌಟುಂಬಿಕ ಸಹಕಾರ.

ಮಕರ
ಹಣದ ಹರಿವು ಹೆಚ್ಚು. ಹಾಗೆಂದು ಸಿಕ್ಕಾಬಟ್ಟೆ ಖರ್ಚಿಗಿಳಿಯದಿರಿ. ಇತರರು ಹರಡುವ ವದಂತಿಗೆ ಕಿವಿಗೊಡದಿರಿ.  ಮನಸ್ಸಿನ ಶಾಂತಿ ಹಾಳು ಮಾಡಿಕೊಳ್ಳದಿರಿ.

ಕುಂಭ
ಮನೆಯವರ ಹಿತಾಸಕ್ತಿ ಗಮನಿಸಿ. ಅವರ ಬೇಕುಬೇಡಗಳಿಗೆ  ಕಿವಿಗೊಡಿ. ಅಜೀರ್ಣ ದಂತಹ ಸಮಸ್ಯೆ ಕಾಡೀತು. ಆಹಾರ ಸೇವನೆ ಚೆನ್ನಾಗಿರಲಿ.

ಮೀನ
ಮನೆಯಲ್ಲಿ ಹೆಚ್ಚು ಕಾರ್ಯದ ಹೊರೆ ಬಿದ್ದೀತು. ಇಷ್ಟವಿಲ್ಲದೆ ಇದ್ದರೂ ಅದನ್ನು ನಿಭಾಯಿಸಲೇ ಬೇಕು. ಬಂಧುಗಳ ಭೇಟಿ, ಮಾತುಕತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here