ಪ್ರಪಾತದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಬಸ್‌, ಪ್ರಯಾಣಿಕರು ಬಚಾವ್‌ ಆಗಿದ್ದು ಹೇಗೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ಖಾಸಗಿ ಬಸ್‌ ನಡುವೆ ಡಿಕ್ಕಿಯಾಗಿ ಬಸ್‌ ಪಲ್ಟಿಯಾಗಿ ಬಸ್‌ನಲ್ಲಿದ್ದ,25ಕ್ಕೂ ಅಧಿಕ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಖಾಸಗಿ ಬಸ್ ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದು, ಈ ವೇಳೆ ಎರಡು ವಾಹನಗಳ ನಡುವೆ ಅಪಘಾತ ಉಂಟಾಗಿದೆ. ಅಪಘಾತದ ರಸಕ್ಕೆ ಬಸ್‌ ಹೆದ್ದಾರಿಯಲ್ಲಿ ಪಲ್ಟಿಯಾದರೆ ಲಾರಿ ಪ್ರಪಾತದ ಕಡೆ ಮುಖಮಾಡಿದೆ. ಲಾರಿಯ ಹಿಂಬದಿಯ ಭಾಗ ಮಾತ್ರ ಹೆದ್ದಾರಿಯ ಮೇಲೆ ನಿಂತಿದೆ. ಸ್ವಲ್ಪ ಏನಾದ್ರೂ ಮುಂದೆ ಜಾರಿದ್ದರೂ ಲಾರಿ ನೂರಾರು ಅಡಿ ಆಳದ ಪ್ರಪಾತಕ್ಕೆ ಬಿಳುವ ಸಾಧ್ಯತೆ ಇತ್ತು. ಅದೃಷ್ಠವಶಾತ್ ಪಾರಾಗಿದೆ.

ಅಪಘಾತದಿಂದಾಗಿ ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ. ಅಪಘಾತವಾದ ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!