ಹೊಸದಿಗಂತ ವರದಿ ಹುಬ್ಬಳ್ಳಿ:
ಹುಬ್ಬಳ್ಳಿ ಧಾರವಾಡ ನೂತನ ಆಯುಕ್ತರಾಗಿ ಈಶ್ವರ್ ಉಳ್ಳಾಗಡ್ಡಿ ಅವರು ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಸ ಸಂಗ್ರಹ, ಕುಡಿಯುವ ನೀರಿನ, ಆಸ್ತಿ ತೆರಿಗೆ ಪಾವತಿ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ ಎಂದರು.
ಅವಳಿನಗರದಲ್ಲಿ ಎಲ್ ಆ್ಯಂಡ್ ಟಿ ಕಂಪನಿ ನೀರಿನ ಸರಬರಾಜು ನಿರ್ವಹಣೆ ಮಾಡುತ್ತಿದ್ದು, ಇನ್ನೂ ಕೆಲವು ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಇದೆ. ಅದನ್ನು ಸರಿಪಡಿಸಲಾಗುತ್ತದೆ ಎಂದು ತಿಳಿಸಿದರು.
ಪೌರ ಕಾರ್ಮಿಕ ನಿತ್ಯ ಉತ್ತಮ ಆಹಾರ, ಆರೋಗ್ಯ ತಪಾಸಣೆ, ಕೆಲಸ ಮಾಡಲು ಜಾಕೆಟ್, ಹ್ಯಾಡ್ ಗ್ಲೌಸ್ ಸೇರಿದಂತೆ ಸುರಕ್ಷತಾ ಸಾಮಾಗ್ರಿ ಕಡ್ಡಾಯವಾಗಿ ನೀಡಲು ಸೂಚಿಸುತ್ತೇನೆ ಎಂದು ಹೇಳಿದರು.
ಇ ಆಸ್ತಿ ಕಡ್ಡಾಯವಾಗಿದೆ. ಸರ್ವರ್ ಸಮಸ್ಯೆ ಆದಷ್ಟು ಬೇಗ ಸರಿಪಡಿಸಲಾಗುವುದು ಎಂದರು.