ಪತ್ನಿಯೊಂದಿಗೆ ಸಲುಗೆಯಿಂದ ಇದ್ದಾನೆಂದು ವ್ಯಕ್ತಿಯ ಕೊಲೆಗೈದ ಪತಿ

ಹೊಸದಿಗಂತ ವರದಿ, ಕೊಪ್ಪಳ:

ಪತ್ನಿ ಜತೆ ಸಲುಗೆಯಿಂದ ಇದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಕೊಲೆಗೈದ ಪತಿ ಸೇರಿ ನಾಲ್ವರು ಆರೋಪಿಗಳನ್ನು ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಎಡೆಮುರಿ ಕಟ್ಟಿದ್ದಾರೆ

ಹಣವಾಳ ಗ್ರಾಮದ ಶಿವಕುಮಾರ ಚಡಿಹಾಳ, ಅಂಬರೇಶ ಕುರಿ, ಮಂಜುನಾಥ ಚಡಿಹಾಳ ಹಾಗೂ ಮಹೇಶ್ವರಿ ಬಂಧಿತ ಆರೋಪಿಗಳು. ಹಣವಾಳ ಗ್ರಾಮದ ಸುರೇಶ (27) ಮೃತಪಟ್ಟ ವ್ಯಕ್ತಿ.

ಸುರೇಶ ಎಂಬಾತ ಏ.28ರಂದು ಮನೆಯಿಂದ ಹೊರಗಡೆ ಬಂದು ಮರಳಿ ಮನೆಗೆ ಹೋಗದ ಕಾರಣ ಕುಟುಂಬಸ್ಥರು ಕಾಣೆಯಾಗಿದ್ದಾನೆ ಎಂದು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ಪತ್ತೆ ಕುರಿತು ವಿಶೇಷ ಪತ್ತೆ ತಂಡ ರಚಿಸಲಾಗಿತ್ತು. ಅಧಿಕಾರಿ ಮತ್ತು ಸಿಬ್ಬಂದಿಯವರು ಮಾಹಿತಿಯನ್ನು ಸಂಗ್ರಹಿಸಿ ಅನುಮಾನದ ಮೇರೆಗೆ ಶಿವಕುಮಾರ ಚಡಿಹಾಳ, ಅಂಧರೇಶ ಕುರಿ, ಮಂಜುನಾಥ ಚಡಿಹಾಳ ಹಾಗೂ ಮಹೇಶ್ವರಿ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!