ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.ಜಿ. ಸೂರ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಧುರೈ ಸಂಸದ ಎಸ್.ವೆಂಕಟೇಶನ್ ಅವರ ಬಗ್ಗೆ ಮಾಡಿದ ಟ್ವೀಟ್ ವಿಚಾರವಾಗಿ ಸೈಬರ್ ಅಪರಾಧ ವಿಭಾಗದ ಪೊಲೀಸರು ನಿನ್ನೆ ರಾತ್ರಿ ಸೂರ್ಯ ಅವರನ್ನು ಬಂಧಿಸಿದ್ದಾರೆ.
ಬಿಜೆಪಿ ಕಾರ್ಯದರ್ಶಿ ಸೂರ್ಯ ಅವರನ್ನು ಬಂಧಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಕಮ್ಯುನಿಸ್ಟ್ ಪಕ್ಷದ ಇಬ್ಬಗೆಯ ನೀತಿಯನ್ನು ಸೂರ್ಯ ಬಯಲು ಮಾಡಿದ್ದಾರೆ. ಇದೇ ಅವರ ತಪ್ಪಾಗಿದೆ. ಈ ರೀತಿ ಬಂಧನಗಳನ್ನು ನಮ್ಮಿಂದ ತಡೆಯೋಕಾಗೋದಿಲ್ಲ. ಆದರೆ ಇಂತಹ ಕಹಿ ಸತ್ಯಗಳನ್ನು ಹೊರಗೆ ತಂದೇ ತರುತ್ತೇವೆ ಎಂದಿದ್ದಾರೆ.