ದಿಗಂತ ವರದಿ ವಿಜಯಪುರ:
ದಲಿತ ಮುಖ್ಯಮಂತ್ರಿ ಆಗೋ ವಿಚಾರದ ಕುರಿತು ನನಗೆ ಗೊತ್ತಿಲ್ಲ, ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಹೇಳಿದರು.
ದಲಿತ ಸಿಎಂ ಕುರಿತು ಚರ್ಚೆ ವಿಚಾರ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ರೀತಿ ಯಾವುದೇ ಮಾಹಿತಿ ಇಲ್ಲಾ. ಆ ರೀತಿಯ ಚಲನ ವಲನ ನಮ್ಮ ಗಮನಕ್ಕೆ ಬಂದಿಲ್ಲಾ ಎಂದರು.
ಖರ್ಗೆ ಸಿಎಂ ಆಗೋ ಬಗ್ಗೆ ಚರ್ಚೆ ವದಂತಿ ಕುರಿತು, ಈ ಭೇಟಿ ಕುರಿತು ಈಗಾಗಲೇ ಸಿಎಂ ಸ್ಪಷ್ಟನೆ ನೀಡಿದ್ದಾರೆ. ದೆಹಲಿಗೆ ಹೋದ ಸಚಿವರು ಎಐಸಿಸಿ ಅಧ್ಯಕ್ಷರಿಗೆ ಭೇಟಿಯಾಗುತ್ತಾರೆ ಎಂದರು.
ದೆಹಲಿಗೆ ಹೋದ ಸಚಿವರು ಭೇಟಿಯಾಗೋದು ಸಹಜ, ಇದಕ್ಕೆ ವಿಶೇಷ ಅರ್ಥ ಕಲ್ಪಿಸೋ ಅಗತ್ಯವಿಲ್ಲ ಎಂದರು.