“ತಾಯಿಯ ಆಶೀರ್ವಾದವಿಲ್ಲದೆ ನಾಮಪತ್ರ ಸಲ್ಲಿಸಿದ್ದೇನೆ, ಗಂಗಾ ಮಾತೆ ನನ್ನನ್ನು ದತ್ತು ತೆಗೆದುಕೊಂಡಿದ್ದಾಳೆ”: ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ತಮ್ಮ ಭಾಷಣದಲ್ಲಿ ತಮ್ಮ ತಾಯಿಯನ್ನು ನೆನಪಿಸಿಕೊಂಡರು ಮತ್ತು ಇದೇ ಮೊದಲ ಬಾರಿಗೆ ನಾನು ಅವರ ಆಶೀರ್ವಾದವನ್ನು ಪಡೆಯದೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದೇನೆ ಎಂದರು. ‘ಮಾ ಗಂಗಾ’ ತನ್ನನ್ನು ಕಾಶಿಗೆ ಕರೆಸಿಕೊಂಡಿದ್ದು, ಆಕೆ ನನ್ನನು ‘ದತ್ತು’ ಪಡೆದಿದ್ದಾಳೆ ಎಂದು ಅವರು ಹೇಳಿದರು.

ವಾರಣಾಸಿಯಲ್ಲಿ ‘ನಾರಿ ಶಕ್ತಿ ಸಂವಾದ್ ಕಾರ್ಯಕ್ರಮ’ವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು. ಭಾಷಣಕ್ಕೂ ಮುನ್ನ ಅವರು ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನದಲ್ಲಿ ಕುಳಿತು ಜನರನ್ನು ಸ್ವಾಗತಿಸಿದರು. ರೋಡ್ ಶೋ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಜೊತೆಗಿದ್ದರು.

“ನನ್ನ ತಾಯಿಯ ಆಶೀರ್ವಾದವಿಲ್ಲದೆ ನಾನು ಮೊದಲ ಬಾರಿಗೆ ಕಾಶಿಗೆ ನಾಮಪತ್ರ ಸಲ್ಲಿಸಿದ್ದೇನೆ. ಮಾ ಗಂಗಾ ನನ್ನ ತಾಯಿ ಅದಕ್ಕಾಗಿಯೇ ಮಾ ಗಂಗೆ ನನ್ನನ್ನು ಮೊದಲು ಕಾಶಿಗೆ ಕರೆದಳು ಮತ್ತು ಈಗ ಮಾ ಗಂಗೆ ನನ್ನನ್ನು ದತ್ತು ತೆಗೆದುಕೊಂಡಿದ್ದಾಳೆ” ಎಂದು ಪ್ರಧಾನಿ ಮೋದಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!