ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ನಟ ಅಲ್ಲು ಅರ್ಜುನ್ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರ ನೋಡಿ ಮೈಮರೆತಿದ್ದಾರೆ. ಸಿನಿಮಾ ವೀಕ್ಷಿಸಿದ ಬಳಿಕ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಕಾಂತಾರ ಚಿತ್ರವನ್ನು ವೀಕ್ಷಿಸಿದೆ. ಅದ್ಭುತ ಸಿನಿಮಾ. ಸಿನಿಮಾ ನೋಡಿ ನಾನು ಮೈಮರೆತೆ. ಒನ್ ಮ್ಯಾನ್ ಆರ್ಮಿ ರಿಷಬ್ ಶೆಟ್ಟಿ ಅವರಿಗೆ ಅಭಿನಂದನೆ. ಅವರು ಬರಹಗಾರನಾಗಿ, ನಿರ್ದೇಶಕನಾಗಿ, ನಟನಾಗಿ ಶ್ರಮಿಸಿದ್ದಾರೆ. ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ ಹಾಗೂ ಇತರರ ನಟನೆ ಉತ್ತಮವಾಗಿದೆ. ಅಜನೀಶ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಕೆಲಸ ಉತ್ತಮವಾಗಿದೆ’ ಎಂದು ಅಲ್ಲು ಅರ್ಜುನ್ ಟ್ವೀಟ್ನಲ್ಲಿ ಹೇಳಿದ್ದಾರೆ.
ʼಸಿನಿಮಾ ನೋಡಿ ಮೈಮರೆತುಬಿಟ್ಟೆ! ರಿಷಭ್ ಶೆಟ್ಟಿ ಒನ್ಮ್ಯಾನ್ ಶೋ ಅದ್ಭುತʼ

