ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋತು ಐಪಿಎಲ್ ಅಭಿಯಾನ ಅಂತ್ಯಗೊಳಿಸಿದೆ. ಆರ್ಸಿಬಿ ಗೆಲುವಿನ ಆಸೆ ಹೊತ್ತಿದ್ದ ಅಭಿಮಾನಿಗಳು ಈ ಬಾರಿ ಕೂಡ ನಿರಾಸೆ ವ್ಯಕ್ತಪಡಿಸಿದ್ದಾರೆ.
ಆದರೆ ತಮ್ಮ ತಂಡವನ್ನು ಬಿಟ್ಟುಕೊಟ್ಟಿಲ್ಲ. ಸೋತರೂ ಗೆದ್ದರೂ ನಮ್ಮವರೇ ಎಂದು ಒಪ್ಪಿಕೊಂಡುಬಿಟ್ಟಿದ್ದಾರೆ. ವಿರಾಟ್ ಕೊಹ್ಲಿ ಕೂಡ ಈ ಪ್ರೀತಿಯನ್ನು ಸ್ವೀಕರಿಸಿದ್ದಾರೆ. ಆದರೆ ಗೆಲುವು ಪಡೆಯದ ನೋವಿನಲ್ಲಿ ಜವಾಬ್ದಾರಿಯಂತೆ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.
ಟೂರ್ನಿಯುದ್ಧಕ್ಕೂ ಬೆಂಬಲ ನೀಡಿರುವ ನಮ್ಮ ಫ್ಯಾನ್ಸ್ಗೆ ನಾನು ಕೃತಜ್ಞನಾಗಿರುತ್ತೀನಿ.ಈ ಬಾರಿ ನಾವು ಉತ್ತಮ ಆರಂಭ ಪಡೆದಿರಲಿಲ್ಲ. ಆದರೆ ಎಂದಿನಂತೆ ಈ ಸಲ ಕೂಡ ನಮ್ಮ ಅಭಿಮಾನಿಗಳ ಬೆಂಬಲ ಅಚಲವಾಗಿತ್ತು. ನಾವು ಸೋತರೂ, ಗೆದ್ದರೂ ಅವರ ಪ್ರೀತಿ ಭಿನ್ನವಾಗಿರಲಿಲ್ಲ. ಇಡೀ ಸೀಸನ್ನಲ್ಲಿ ಅವರ ಬೆಂಬಲವು ಅಚಲವಾಗಿತ್ತು.
ತವರು ಮೈದಾನದಲ್ಲಿ ಮಾತ್ರವಲ್ಲದೆ ಇತರೆ ಸ್ಟೇಡಿಯಂನಲ್ಲೂ ನೀವು ಅಪಾರ ಸಂಖ್ಯೆಯಲ್ಲಿ ಬೆಂಬಲ ನೀಡಿದ್ದೀರಿ. ನಿಮ್ಮ ಈ ಅಭೂತಪೂರ್ವ ಬೆಂಬಲಕ್ಕಾಗಿ ನಾನು ಎಂದೆಂದಿಗೂ ಕೃತಜ್ಞನಾಗಿರುತ್ತೀನಿ. ನಿಮ್ಮ ಬೆಂಬಲ ಮತ್ತು ಹಾರೈಕೆಗೆ ತುಂಬಾ ಹೃದಯದ ಧನ್ಯವಾದಗಳು ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.