ವಿಜಯದಶಮಿ ವರೆಗೂ ಕಾದು ನೋಡುತ್ತೇನೆ: ಹೊಸ ಪಕ್ಷ ರಚನೆ ಕುರಿತು ಯತ್ನಾಳ್ ರಿಯಾಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದೀಗ ಮುಂಬರುವ ವಿಜಯದಶಮಿಯ ಬಳಿಕ ರಾಜ್ಯದಲ್ಲಿ ಹೊಸ ಪಕ್ಷ ಕಟ್ಟುವ ಪ್ಲಾನ್ ಹಾಕಿಕೊಂಡಿದ್ದು, ಈ ಕುರಿತು ಮಾತನಾಡಿ ವಿಜಯದಶಮಿ ವರೆಗೂ ಕಾದು ನೋಡುತ್ತೇನೆ ಬಳಿಕ ಹೊಸ ಪಕ್ಷ ರಚನೆ ಕುರಿತಂತೆ ಪ್ಲಾನ್ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನಲ್ಲ ನನ್ನ ಹೆಣ, ಚಪ್ಪಲಿನೂ ಕಾಂಗ್ರೆಸ್ ಗೆ ಹೋಗಲ್ಲ. ಹೊಸ ಪಕ್ಷದ ಬಗ್ಗೆ ಆಲೋಚನೆ ಇದೆ ಅದು ಅಷ್ಟು ಸುಲಭವಲ್ಲ. ಹಿಂದುಗಳ ಮತ ವಿಭಜನೆ ಆಗಬಾರದು ಅನ್ನುವುದು ನನ್ನ ಪ್ಲಾನ್. ವಿಜಯದಶಮಿಯವರೆಗೂ ಕಾದು ನೋಡುತ್ತೇನೆ. ನಾನು ಪಕ್ಕಾ ಪ್ಲಾನ್ ಮಾಡಿದ್ದೇನೆ.ರಾಜಕೀಯ ಜೀವನದಲ್ಲಿ ಕೆಲವು ಬಾರಿ ಮಾತು ಮುಳುವಾಗಿದೆ ಎಂದು ಹೇಳಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!