ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಕಾಶ್ಮೀರದ ಪಹಲ್ಗಾಮ್ ನಲ್ಲಿ ಸ್ಥಳೀಯ ಜನತೆ ಜೊತೆಗೆ ಆಚರಿಸಿದೆ. ಈ ಮೂಲಕ ಶಸಸ್ತ್ರ ಪಡೆಯ ಜೊತೆಗೆ ಕೈಜೋಡಿಸಿದ್ದು ಜಮ್ಮು ಕಾಶ್ಮೀರ ಜನತೆಯಡೆಗಿನ ತನ್ನ ಬದ್ಧತೆಯನ್ನು ಪುನರ್ ಉಚ್ಛರಿಸಿದೆ.
ಐತಿಹಾಸಿಕ ನಡೆಯಾಗಿ ಐಸಿಎಐ ತನ್ನ 445 ನೇ ಕೌನ್ಸಿಲ್ ಸಭೆಯನ್ನು ಆಗಸ್ಟ್ 12-14ರವರೆಗೆ ಪಹಲ್ಗಾಮ್ ನಲ್ಲಿ ನಡೆಸಿದೆ. ಈ ಮೂಲಕ ಕಾಶ್ಮೀರದ ವ್ಯಾಲಿಯಲ್ಲಿ ಏಪ್ರಿಲ್ 22ರ ಭಯೋತ್ಪಾದಕ ಘಟನೆ ಬಳಿಕ ಉನ್ನತ ಮಟ್ಟದ ಸಭೆ ನಡೆಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಐಸಿಎಐ ಪಡೆದುಕೊಂಡಿದೆ.
ಸಂಸ್ಥೆಯ ಸದಸ್ಯರು ಅವರ ಕುಟುಂಬಸ್ಥರು, ಮಕ್ಕಳು ಸೇರಿ 130 ಜನರು ಪಹಲ್ಗಾಮ್ ಗೆ ಭೇಟಿ ನೀಡಿದ್ದು ಐಸಿಎಐ ಗೆ ಪ್ರದೇಶದ ಮೇಲಿನ ನಂಬಿಕೆ, ಶಾಂತಿ ಸೌಹಾರ್ದತೆಯ ಧ್ಯೇಯವನ್ನು ಸಾರಿದೆ. ಭಯೋತ್ಪಾದಕ ದಾಳಿಯ ಬಳಿಕ ‘ ದೇಶ ಒಗ್ಗಟ್ಟಾಗಿದೆ, ಕಾಶ್ಮೀರ ವ್ಯಾಲಿ ಎಂದಿಗೂ ಭಾರತದ ಅವಿಭಾಜ್ಯ ಅಂಗ ಎಂಬ ದೃಢ ನಂಬಿಕೆಯನ್ನು ಹೊಂದಿದೆ’ ಎಂಬ ಸಂದೇಶ ನೀಡಿದೆ. 130 ಜನರ ಈ ತಂಡದ ಭೇಟಿಯಿಂದ ಸ್ಥಳೀಯರಲ್ಲಿ ಸಕಾರಾತ್ಮಕ ಭಾವನೆ ಮೂಡಿದ್ದು ಇದು ದೇಶದ ಜನರು ಹೆಚ್ಚಿನ ಜನಸಂಖ್ಯೆಯಲ್ಲಿ ಪಹಲ್ಗಾಮ್ಗೆ ಭೇಟಿ ನೀಡಿ ಅಲ್ಲಿನ ಪ್ರವಾಸೋದ್ಯಮ ಉತ್ತೇಜಿಸುವ ಭರವಸೆ ನೀಡಿದೆ. ಮೂರು ದಿನಗಳ ಸಭೆಯಲ್ಲಿ ಕೌನ್ಸಿಲ್ ವೃತ್ತಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಚರ್ಚಿಸಿದೆ.
ಜೆ&ಕೆ ಸರ್ಕಾರದೊಂದಿಗೆ ಹಲವು ಉಪಕ್ರಮಗಳು
ಜಮ್ಮು ಮತ್ತು ಕಾಶ್ಮೀರ ಸರ್ಕಾರದೊಂದಿಗೆ ಐಸಿಎಐ ಹಲವು ಸಹಯೋಗದ ಉಪಕ್ರಮಗಳನ್ನು ಪ್ರಸ್ತಾಪಿಸಿದೆ. ಯುನಿವರ್ಸಿಟಿಗಳಲ್ಲಿ ಶಿಕ್ಷಣ ಅಭಿವೃದ್ದಿ, ಸ್ಥಳೀಯ ಸಂಸ್ಥೆಗಳಲ್ಲಿ ಅಕೌಂಟಿಂಗ್ ಸಂಬಂಧಿಸಿದ ಬದಲಾವಣೆಗಳು, ಸರ್ಕಾರಿ ಇಲಾಖೆಗಳಿಗೆ ಅಕ್ರುವಲ್ ಬೇಸ್ಡ್ ಅಕೌಂಟಿಂಗ್, ಇತ್ಯಾದಿ. ಸ್ಥಳೀಯ ವಿದ್ಯಾರ್ಥಿಗಳಿಗೆ ಬೆಂಬಲ ನೀಡಲು ಸಿಎ ಕೋರ್ಸ್ ನೊಂದಣಿ ಶುಲ್ಕದಲ್ಲಿ ಶೇ, 75 ರಷ್ಟು ವಿನಾಯಿತಿ , ಕೌಶಲ್ಯ , ಸಂಶೋಧನೆ , ಸಾಮರ್ಥ ಅಭಿವೃದ್ಧಿ ಹೆಚ್ಚಿಸಲು ‘ಸೆಂಟರ್ ಆಫ್ ಎಕ್ಸಲೆನ್ಸ್ ‘ ಸ್ಥಾಪಿಸಲು ಯೋಜನೆ ಪ್ರಸ್ತಾಪಿಸಲಾಗಿದೆ.
ಈ ಕುರಿತು ಮಾತನಾಡಿದ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರಮುಖ ಸಭೆಯನ್ನು ಪಹಲ್ಗಾಮ್ನಲ್ಲಿ ನಡೆಸಿದ್ದಕ್ಕಾಗಿ ಐಸಿಎಐಗೆ ಧನ್ಯವಾದ. ನಿಮ್ಮ ಉಪಸ್ಥಿತಿ ಬೆಂಬಲ ಮತ್ತು ಆತ್ಮಸ್ಥೈರ್ಯದ ಸಂದೇಶವನ್ನು ನೀಡುತ್ತದೆ. ಈ ಭೇಟಿ ಈ ಪ್ರದೇಶದೆಡೆಗಿನ ನಿಮ್ಮ ನಂಬಿಕೆ ಮತ್ತು ಉತ್ತಮ ದಿನಗಳು ಬರಲಿವೆ ಎಂಬ ಭರವಸೆಯನ್ನು ತೋರುತ್ತದೆ ಎಂದು ಹೇಳಿದರು ಜೊತೆಗೆ ರಾಜ್ಯ ಉತ್ತಮ ಪಾಲಿಸಿಗಳನ್ನು ತರಲು, ಆಡಳಿತ ಸುಧಾರಿಸಲು ಮತ್ತು ಉತ್ತಮ ಆರ್ಥಿಕ ಯೋಜನಗಳನ್ನು ತರಲು ಸಹಾಯ ಮಾಡುವಲ್ಲಿ ಐಸಿಎಐನ ಸಾಮರ್ಥ್ಯವನ್ನು ಗುರುತಿಸಿದರು.
ಇದೇ ಸಂದರ್ಭದಲ್ಲಿ ಐಸಿಎಐ ಅಧ್ಯಕ್ಷ ಸಿಎ. ಚರಣ್ಜೋತ್ ಸಿಂಗ್ ನಂದಾ ಮಾತನಾಡಿ ಇಲ್ಲಿ ನಮ್ಮ ಉಪಸ್ಥಿತಿಯು ಸಾಂಕೇತಿಕಕ್ಕಿಂತ ಹೆಚ್ಚಿನದಾಗಿದೆ. ಇದು ಭರವಸೆ, ಸ್ಥಿತಿಸ್ಥಾಪಕತ್ವ ಮತ್ತು ಶಾಶ್ವತ ಶಾಂತಿ ಮತ್ತು ಹಂಚಿಕೆಯ ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುವ ನಮ್ಮ ಪ್ರತಿಜ್ಞೆಗೆ ಸಾಕ್ಷಿಯಾಗಿದೆ. ನಾವು ಕೇವಲ ಆರ್ಥಿಕ ವಾಸ್ತುಶಿಲ್ಪಿಗಳಲ್ಲ, ರಾಷ್ಟ್ರ ನಿರ್ಮಾಣದಲ್ಲಿ ನಾವು ಪಾಲುದಾರರು. ಈ ಭೇಟಿಯ ಮೂಲಕ, ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಥಿಕ ಪುನರುಜ್ಜೀವನ, ಉತ್ತಮ ಪ್ರವಾಸೋದ್ಯಮ ಮತ್ತು ಅರ್ಥಪೂರ್ಣ ಅಭಿವೃದ್ಧಿ ಸಹಯೋಗಗಳಿಗೆ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ ಎಂದರು.