ಇಡುಕ್ಕಿಯ ಮುಲ್ಲಪೆರಿಯಾರ್ ಅಣೆಕಟ್ಟಿನ ಗೇಟ್ ಓಪನ್: ತಮಿಳುನಾಡಿಗೆ ಹರಿದ ನೀರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಡುಕ್ಕಿಯ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ತಮಿಳುನಾಡು ನೀರು ಹೋಗಲು ಶುರುವಾಗಿದೆ. ಸೆಕೆಂಡಿಗೆ 300 ಕ್ಯೂಸೆಕ್ ಅಡಿ ನೀರನ್ನು 120 ದಿನಗಳವರೆಗೆ ಬಿಡಲಾಗಿದೆ. 200 ಕ್ಯೂಸೆಕ್ ಅಡಿ ನೀರನ್ನು ಕೃಷಿಗೂ 100 ಕ್ಯೂಸೆಕ್ ಅಡಿ ನೀರನ್ನು ಕುಡಿಯುವ ನೀರಿಗೂ ಬಿಡಲಾಗುತ್ತಿದೆ. ಐದು ಜಿಲ್ಲೆಗಳ ಕೃಷಿ ಅಗತ್ಯಗಳಿಗಾಗಿ ತಮಿಳುನಾಡು ನೀರನ್ನು ಬಳಸುತ್ತದೆ.

ತೇಕ್ಕಡಿಯಲ್ಲಿ ನಡೆದ ವಿಶೇಷ ಪೂಜೆಗಳ ನಂತರ ತೇಣಿ ಜಿಲ್ಲಾಧಿಕಾರಿ ರಂಜಿತ್ ಸಿಂಗ್ ಶಟರ್ ತೆರೆದರು. ತೇಣಿ ಜಿಲ್ಲೆಯಲ್ಲಿ 14700 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಆರಂಭಿಸಲು ಪೂರ್ವ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ತೇಣಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ನೀರು ಬಿಡುಗಡೆಯಿಂದ ಥೇಣಿ, ಉತ್ತಮಪಾಳ್ಯಂ ಮತ್ತು ಬೋಡಿ ತಾಲ್ಲೂಕುಗಳಾದ್ಯಂತ 14,707 ಎಕರೆ ಭೂಮಿಗೆ ಪ್ರಯೋಜನವಾಗಲಿದೆ.

ಶುಕ್ರವಾರ ಮಧುರೈ ಜಿಲ್ಲಾಧಿಕಾರಿ ಎಂ.ಎಸ್. ಸಂಗೀತಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದ್ವಿ ಬೆಳೆ ಪ್ರದೇಶದ ಮೊದಲ ಬೆಳೆಗೆ ನೀರುಣಿಸಲು ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಬೇಕು ಎಂದು ರೈತರು ಒತ್ತಾಯಿಸಿದರು. ಹೆಚ್ಚಿನ ನೀರನ್ನು ಸಂಗ್ರಹಿಸಲು ಜಲಮೂಲಗಳನ್ನು ಹೂಳು ತೆಗೆದು ಆಳಗೊಳಿಸಬೇಕೆಂದು ರೈತರು ಅಧಿಕಾರಿಗಳನ್ನು ಒತ್ತಾಯಿಸಿದರು. ರೈತರು ಜಲಮೂಲಗಳಿಂದ ಪ್ರೊಸೊಪಿಸ್ ಜುಲಿಫ್ಲೋರಾ (ಸೀಮೈ ಕರುವೇಲಂ) ಮರಗಳನ್ನು ತೆಗೆದುಹಾಕುವಂತೆಯೂ ಕೋರಿದರು ಸದ್ಯ ನೀರು ಬಿಡುಗಡೆ ಮಾಡಲಾಗಿದೆ.

ಕೇರಳದಲ್ಲಿ ನೈಋತ್ಯ ಮಾನ್ಸೂನ್ ಈ ಬಾರಿ ಅವಧಿಗೂ ಮೊದಲೆ ಬಂದಿದ್ದರಿಂದ ತಮಿಳುನಾಡಿನ ದಕ್ಷಿಣ ಭಾಗಗಳ ಪಶ್ಚಿಮ ಘಟ್ಟಗಳಲ್ಲಿ ವ್ಯಾಪಕ ಮಳೆಯಾಯಿತು. ಜೊತೆಗೆ ನೀರು ಅಣೆಕಟ್ಟು ತುಂಬಿ ಅಪಾಯದ ಮಟ್ಟ ಮೀರಿ ಹರಿದಿದೆ. ಅಣೆಕಟ್ಟಿನ ಸುರಕ್ಷತೆ ಬಗ್ಗೆ ಕೇರಳ ಸರ್ಕಾರ ಕಳವಳ ಕೂಡ ವ್ಯಕ್ತಪಡಿಸಿದೆ. ಈ ಅಣೆಕಟ್ಟಿನಲ್ಲಿ ಒಟ್ಟು ಸಂಗ್ರಹಣಾ ಮಟ್ಟ 142 ಅಡಿಗಳು. ತಮಿಳುನಾಡು ಕೇರಳದ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ಕೃಷಿಗಾಗಿ, ಮುಖ್ಯವಾಗಿ ನೀರಾವರಿ ಮತ್ತು ಕುಡಿಯುವ ನೀರಿನ ಅಗತ್ಯಗಳಿಗಾಗಿ ನೀರನ್ನು ಪಡೆಯುತ್ತದೆ. ಅಣೆಕಟ್ಟಿನ ನೀರನ್ನು ಸುರಂಗಗಳ ಮೂಲಕ ತಮಿಳುನಾಡಿನ ವೈಗೈ ಜಲಾನಯನ ಪ್ರದೇಶಕ್ಕೆ ಬಿಡಲಾಗುತ್ತದೆ. ಇದು ಥೇಣಿ, ಮಧುರೈ, ದಿಂಡಿಗಲ್, ಶಿವಗಂಗೈ ಮತ್ತು ರಾಮನಾಥಪುರಂನಂತಹ ಜಿಲ್ಲೆಗಳಿಗೆ ನೀರಿನ ಅವಶ್ಯಕತೆಯನ್ನು ಒದಗಿಸಲಾಗುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!