ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ಕೆಜಿ ಉಚಿತ ಆಹಾರ ಧಾನ್ಯ ವಿತರಣೆ: ರಾಹುಲ್ ಗಾಂಧಿ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ಸರ್ಕಾರ ದೇಶದ ಬಡ ಕುಟುಂಬಗಳಿಗಾಗಿ ಪ್ರತಿ ತಿಂಗಳು 5 ಅಲ್ಲ 10 ಕೆಜಿ ಉಚಿತ ರೇಷನ್ ನೀಡಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ‘ಆಹಾರ ಭದ್ರತಾ ಕಾಯ್ದೆ’ ಮೂಲಕ ಆಹಾರದ ಹಕ್ಕಿಗೆ ಕಾನೂನು ಸ್ಥಾನಮಾನ ನೀಡಿದ್ದೆವು, ’10 ಕೆಜಿ ಆಹಾರ ಧಾನ್ಯ ವಿತರಣೆ’ ಈ ನಿಟ್ಟಿನಲ್ಲಿ ಮುಂದಿನ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

10 ಕೆಜಿ ಪಡಿತರ ಮತ್ತು ತಿಂಗಳಿಗೆ 8500 ರೂ. ಇವುಗಳಿಂದ ಶಿಕ್ಷಣ ಮತ್ತು ಸ್ವಯಂ ಉದ್ಯೋಗಕ್ಕೆ ಉತ್ತೇಜನ ಸಿಗಲಿದೆ ಮತ್ತು ಕೋಟ್ಯಾಂತರ ಕುಟುಂಬಗಳು ಬಡತನದಿಂದ ಹೊರಬಂದು ದೇಶದ ಆರ್ಥ ವ್ಯವಸ್ಥೆಗೆ ವೇಗ ನೀಡಲಿವೆ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!