ಬಾಯಾರಿಕೆ ಇಲ್ಲದಿದ್ರೂ ನೀರು ಕುಡೀರಿ ತೆಲಂಗಾಣದ ಜನರಿಗೆ ಐಎಂಡಿ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣದಲ್ಲಿ ಇಂದು ಹಾಗೂ ನಾಳೆ ಭಾರೀ ಬಿಸಿಲು ಇರಲಿದ್ದು, ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

ಬಾಯಾರಿಕೆ ಆಗದಿದ್ದರೂ ನೀರು ಕುಡಿಯಿರಿ, ಅನಾವಶ್ಯಕ ಓಡಾಟ ಬೇಡ, ಹೊರಗೆ ಹೋಗುವವರು ಸ್ಕಾರ್ಫ್ ಧರಿಸಿ ಎಂದು ಸೂಚನೆ ನೀಡಿದೆ.

ಎರಡೂ ದಿನ ಭಾರೀ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ. ಹಾಗಾಗಿ ಜನರು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಹೇಳಲಾಗಿದೆ. ಹಿರಿಯರು ಹಾಗೂ ಮಕ್ಕಳು ಆದಷ್ಟು ಮನೆಯಲ್ಲಿಯೇ ಇದ್ದರೆ ಉತ್ತಮ. ನೀರು ಹಾಗೂ ಜ್ಯೂಸ್ ಸೇವನೆ ಮಾಡಿ ಎಂದು ಸೂಚನೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!