ಹೊಸದಿಗಂತ ವರದಿ ಹಾಸನ :
ಜಿಲ್ಲೆಯ ಮಲೆನಾಡು ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಾಗುತ್ತಿದ್ದು, ಆನೆಗಳನ್ನು ನಿಯಂತ್ರಿಸಲು ಹಾಗೂ ಜನರಿಗೆ ಎಚ್ಚರಿಕೆ ನೀಡಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದ್ದು, ಮೊದಲ ದಿನವೇ ಆನೆ ಕಾರ್ಯಪಡೆಯು ಬಿಟ್ಟಮ್ಮ ಹೆಣ್ಣು ಆನೆಗೆ ರೇಡಿಯೋ ಕಾಲಾರ್ ಅಳವಡಿಸುವಲ್ಲಿ ಯಶಸ್ವಿಯಾಗಿದೆ.
ಹಾಸನ ಜಿಲ್ಲೆಯ ಆಲೂರು, ಸಕಲೇಶಪುರ, ಅರಕಲಗೂಡು ಹಾಗೂ ಬೇಲೂರು ತಾಲೂಕಿನ ಮಲೆನಾಡು ಭಾಗಗಳಲ್ಲಿ ಕಾಡಾನೆಗಳು ಸಾಮಾನ್ಯವಾಗಿ ಗುಂಪಿನಲ್ಲಿ ಓಡಾಡುತ್ತಿದ್ದು, ಅವುಗಳ ಮೇಲೆ ನಿಗಾ ಇಡುವುದು ಸುಲಭದ ಮಾತಲ್ಲ. ಗುಂಪಿನಲ್ಲಿರುವ ಹೆಣ್ಣಾನೆಯ ಮೇಲೆ ಕಣ್ಣಿಟ್ಟರೆ, ಇಡೀ ಗುಂಪಿನ ಇರುವಿಕೆಯನ್ನು ಪತ್ತೆ ಹಚ್ಚಬಹುದಾಗಿದೆ. ಇದೇ ಉದ್ದೇಶದಿಂದ ಅರಣ್ಯ ಇಲಾಖೆ ನ.24 ರಿಂದ ಡಿ.15 ರವರೆಗೆ ಒಂಬತ್ತು ಕಾಡಾನೆಗಳಿಗೆ ರೆಡಿಯೊ ಕಾಲರ್ ಅಳವಡಿಸುವ ಕಾರ್ಯಾಚರಣೆ ಆರಂಭಿಸಿದೆ. ನ.24 ರಂದು ಶುಕ್ರವಾರ ಮೊದಲ ದಿನವೇ ಆರಂಭಗೊಂಡಿದ್ದ ರೆಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆಯು ಯಶಸ್ವಿಯಾಗಿದ್ದು, ಬಿಟ್ಟಮ್ಮ ಎಂಬ ಹೆಸರಿನ ಹೆಣ್ಣಾನೆಗೆ ತಜ್ಞರು ಅರವಳಿಕೆ ನೀಡಿ ಕಾಲಾರ್ ಐಡಿ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಸಮೀಪದ ಕೋಡಿಹಳ್ಳಿ ಮಲ್ನಾಡ್ ಗ್ರೀನ್ ಲ್ಯಾಂಡ್ ಎಸ್ಟೇಟ್ನಲ್ಲಿ ಸುಮಾರು 30 ಆನೆಗಳು ಹಾಗೂ ಮರಿ ಆನೆಗಳು ಬೀಡು ಬಿಟ್ಟಿವೆ. ಈ ವಲಯದಲ್ಲಿ ಹೆಚ್ಚು ಹಾವಳಿ ಇರುವುದರಿಂದ ಕಾರ್ಯಪಡೆಯು ಮೊದಲ ದಿನವೇ ಇಲ್ಲಿ ಕಾರ್ಯಾಚರಣೆ ಆರಂಭ ಮಾಡಿದೆ. ಕಾರ್ಯಾಚರಣೆ ಆರಂಭ ಮೊದಲು ಸಾಕಾನೆಗಳಿಗೆ ಅರಣ್ಯ ಅಕಾರಿ ಸೇರಿದಂತೆ ಬೇಲೂರು ಶಾಸಕ ಹೆಚ್.ಕೆ ಸುರೇಶ್ ಪೂಜೆ ಮಾಡುವ ಮೂಲಕ ಕಾರ್ಯಾಚರಣೆಗೆ ಚಾಲನೆ ನೀಡಿದರು. ಅರಣ್ಯ ಇಲಾಖೆ ಹಾಗೂ ತಜ್ಞರ ತಂಡವು ಬೆಳಗ್ಗೆ ೧೧;೧೫ ಕಾರ್ಯಾಚರಣೆ ಆರಂಭಿಸಿ ಸುಮಾರು ೩೦ ಆನೆಗಳ ಗುಂಪಿನಲ್ಲಿದ್ದ ಹೆಣ್ಣಾನೆ ಬಿಟ್ಟಮ್ಮ ಆನೆಗೆ ಮೂರು ಭಾರಿ ಅರವಳಿ ಮದ್ದು ನೀಡಿ ಮಧ್ಯಾಹ್ನ ೧;೩೦ ಕ್ಕೆ ರೇಡಿಯೋ ಕಾಲಾರ್ ಐಡಿಯನ್ನು ಅಳವಡಿಕೆ ಮಾಡಿ ಯಶಸ್ವಿಯಾದರು.
ಡಿಎಎಫ್ಓ ಮೋಹನ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭ ಆಗಿದ್ದು, ಸ್ಥಳದಲ್ಲಿ ಪೊಲೀಸರಿಂದ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಹಿಂದೆ ಗಾಯಾಳು ಭೀಮ ಎಂಬ ಆನೆಯನ್ನು ಸೆರೆ ಹಿಡಿಯುವ ವೇಳೆ ನಡೆದ ಅನಾಹುತದಲ್ಲಿ ಶಾರ್ಪ್ ಶೂಟರ್ ವೆಂಕಟೇಶ್ ಬಲಿಯಾದ ಹಿನ್ನೆಲೆ, ಈಗ ಎಲ್ಲಾ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಮುಗಿದ ಬಳಿಕ ಸಾಕಷ್ಟು ತೊಂದರೆ ನೀಡುತ್ತಿರುವ ಐದು ಪುಂಡಾನೆ ಸೆರೆ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಸಾಕಾನೆಗಳಾದ ಅರ್ಜುನ, ಪ್ರಶಾಂತ್, ಸುಗ್ರಿವ, ಧನಂಜಯ, ಅಶ್ವಧಮ್ ಹಾಗೂ ಕರ್ನಾಟಕದ ಭೀಮ ಸೇರಿದಂತೆ ಒಟ್ಟು 6 ಸಾಕಾನೆಗಳು ಕಾಡಾನೆ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದವು.
ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಪಶುವೈದ್ಯ ರಮೇಶ್, ಮಡೀಕೇರಿ ವಿಭಾಗದ ದುಬಾರೆಯಿಂದ ಉಪ ಅರಣ್ಯ ಅಕಾರಿ ರಂಜನ್, ನವೀನ್, ಹಾಸನ ಉಪ ಅರಣ್ಯ ಸಂರಕ್ಷಣಾಕಾರಿ ಮೋಹನ್ ಕುಮಾರ್, ಮುಖ್ಯ ಅರಣ್ಯ ಸಂರಕ್ಷಣಾಕಾರಿ ಆರ್. ರವಿಶಂಕರ್, ಎಸಿಎಫ್ಪ್ರಭು, ಸಕಲೇಶಪುರ, ಹೊಳೆನರಸೀಪುರ, ಅರಕಲಗೂಡು, ಆಲೂರು ತಾಲೂಕಿನ ಅರಣ್ಯ ವಲಯ ಅಕಾರಿಗಳು ಸೇರಿದಂತೆ ಸಿಬ್ಬಂ ವರ್ಗದವರು ಹಾಜರಿದ್ದರು.
ರೇಡಿಯೋ ಕಾಲರ್ ಅಳವಡಿಕೆಯಿಂದ ಆಗುವ ಪ್ರಯೋಜನ ; ರೆಡಿಯೋ ಕಾಲರ್ ಅಳವಡಿಸಿದ ಆನೆ ಇರುವ ಗುಂಪಿನ ಬಗ್ಗೆ ಸುಲಭದಲ್ಲಿ ಮಾಹಿತಿ ಲಭ್ಯವಾಗುತ್ತಿದೆ. ಅದನ್ನು ಆನೆ ಕಾರ್ಯಪಡೆ ಸಿಬ್ಬಂದಿಗೆ ರವಾನಿಸಲಾಗುತ್ತದೆ. ಕಾರ್ಯಪಡೆ ಸಿಬ್ಬಂದಿ ಸುತ್ತಲಿನ ಗ್ರಾಮಗಳಿಗೆ ತೆರಳಿ, ವಾಹನಗಳಲ್ಲಿ ಧ್ವನಿವರ್ಧಕದ ಮೂಲಕ ಆನೆಗಳ ಇರುವಿಕೆಯ ಬಗ್ಗೆ ಮಾಹಿತಿ ನೀಡುತ್ತಾರೆ. ಇದರಿಂದ ಗ್ರಾಮಸ್ಥರು ಎಚ್ಚರಿಕೆಯಿಂದ ಇರಲು ಅನುಕೂಲವಾಗಿದೆ.