ದಿಗಂತ ವರದಿ ಶಿವಮೊಗ್ಗ :
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಇದುವರೆಗೆ ನಡೆದ ಸುಮಾರು 18 ಸುತ್ತುಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಸುಮಾರು 2 ಲಕ್ಷಕ್ಕೂ ಅಧಿಕಮತಗಳ ಅಂತರದಿಂದ ಮುಂದಿರುವುದರಿಂದ ಕಾರ್ಯಕರ್ತರು, ಮುಖಂಡರು ಜಿಲ್ಲಾ ಬಿಜೆಪಿ ಕಚೇರಿ ಮುಂದೆ ಜಮಾಯಿಸಿದ್ದಾರೆ.
ವಿಜಯೋತ್ಸವಕ್ಕೆ ಅಲಂಕೃತ ತೆರೆದ ವಾಹನವನ್ನು ಸಿದ್ಧಪಡಿಸಿದ್ದು, ಪಟಾಕಿಗಳ ಸುರಿಮಳೆ ಸುರಿಸಲಾಗುತ್ತಿದೆ. ನಿಷೇಧಾಜ್ಞೆಯ ನಡುವೆಯೂ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲುಮುಟ್ಟಿದೆ.