ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಕ್ವೀನ್ ಕಂಗನಾ ರಣಾವತ್ 2022ರ ಹೊಸ ವರ್ಷವನ್ನು ತಿರುಪತಿಗೆ ಭೇಟಿ ನೀಡಿ, ತಿಮ್ಮಪ್ಪನ ದರುಶನ ಪಡೆದು ಶುರುಮಾಡಿದ್ದಾರೆ.
2021ರಲ್ಲಿ ಸದಾ ಒಂದಿಲ್ಲೊಂದು ವಿವಾದಗಳಿಂದ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಕಂಗನಾ, ಶನಿವಾರ ಬೆಳ್ಳಂಬೆಳಗ್ಗೆ ಬಾಲಾಜಿ ಹಾಗೂ ಶ್ರೀಕಾಳಹಸ್ತಿ ದೇಗುಲಕ್ಕೆ ತೆರಳಿ ದೇವರ ದರುಶನ ಪಡೆದರು.
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿರುವ ಕಂಗನಾ, 2022ರಲ್ಲಿ ಕಡಿಮೆ ಪೊಲೀಸ್ ಪ್ರಕರಣ, ಎಫ್ಐಆರ್ ದಾಖಲಾಗುವಂತೆ ಮತ್ತು ಹೆಚ್ಚಿನ ಪ್ರೇಮ ಪತ್ರಗಳು ಬರುವಂತೆ ದೇವರ ಬಳಿ ಕೇಳಿಕೊಂಡಿದ್ದಾರೆ ಎಂದು ಬರೆದಿದ್ದಾರೆ.
ಇದೇ ವೇಳೆ ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿರುವ ಕಂಗನಾ, ತಿರುಪತಿ ಬಾಲಾಜಿ ಆಶೀರ್ವಾದದೊಂದಿಗೆ ಈ ವರ್ಷ ಪ್ರಾರಂಭ ಮಾಡುತ್ತಿದ್ದೇನೆ. ಇದು ಸ್ಮರಣೀಯವಾಗಿರಲಿದೆ ಎಂದಿದ್ದಾರೆ.