ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಪಿಐ(ಎಂ) ಕೇರಳದಲ್ಲಿ ಅಭಿವೃದ್ಧಿಗಿಂತ ಕೇಡರ್ ಕಲ್ಯಾಣಕ್ಕೆ ಆದ್ಯತೆ ನೀಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ತಿರುವನಂತಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ (ಬಿಜೆಪಿ) ಕೇಡರ್ಗಿಂತ ವಿಕಸಿತ ಕೇರಳ (ಅಭಿವೃದ್ಧಿ ಹೊಂದಿದ ಕೇರಳ) ಅನ್ನು ಆಯ್ಕೆ ಮಾಡಿತು. 2026ರ ಮಾರ್ಚ್ 31ರ ವೇಳೆಗೆ ಭಾರತ ನಕ್ಸಲಿಸಂ ಮುಕ್ತವಾಗಲಿದೆ ಎಂದು ಭರವಸೆ ನೀಡಿತು ಎಂದು ಹೇಳಿದರು.
ಬಿಜೆಪಿ ಮತ್ತು ಸಿಪಿಐ(ಎಂ) ಎರಡೂ ಕೇಡರ್ ಆಧಾರಿತ ಪಕ್ಷ. ಆದರೆ, ಎರಡರ ನಡುವೆ ಭಾರೀ ವ್ಯತ್ಯಾಸವಿದೆ. ಕೇರಳದಲ್ಲಿ ರಾಜ್ಯದ ಅಭಿವೃದ್ಧಿಗಿಂತ ಕೇಡರ್ ಕಲ್ಯಾಣ ಮಹತ್ವದ್ದಾಗಿದೆ. ಆದರೆ ಬಿಜೆಪಿಗೆ ಕೇಡರ್ಗಿಂತ ವಿಕಸಿತ ಕೇರಳ ಮುಖ್ಯ ಎಂದು ಶಾ ಹೇಳಿದ್ದಾರೆ.
ಇದೇ ವೇಳೆ ಕೇರಳದ ಎಲ್ಡಿಎಫ್ ಸರ್ಕಾರ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ವಿರುದ್ಧ ಗುಡುಗಿದ ಶಾ , ಎಲ್ಡಿಎಫ್ ಮತ್ತು ಯುಡಿಎಫ್ಗಳ ಸಾಧನೆ ಭ್ರಷ್ಟ ಸರ್ಕಾರವಾಗಿದೆ. ಎಲ್ಡಿಎಫ್ ಸ್ಫೋಟಕ ಹಗರಣ, ಸಹಕಾರಿ ಬ್ಯಾಂಕ್ ಹಗರಣ, ಎಐ ಕ್ಯಾಮೆರಾ ಹಗರಣ, ಲೈಫ್ ಮಿಷನ್ ಹಗರಣ, ಪಿಪಿಇ ಕಿಟ್ ಹಗರಣ ಮತ್ತು ಭಾರತದ ಅತಿದೊಡ್ಡ ಹಗರಣವಾದ ರಾಜ್ಯ ಪ್ರಾಯೋಜಿತ ಚಿನ್ನದ ಕಳ್ಳಸಾಗಣೆ ಹಗರಣವನ್ನು ಮಾಡಿದೆ ಎಂದರು.
ಬಿಜೆಪಿ ಇಲ್ಲದೆ ವಿಕಸಿತ ಕೇರಳ ಸಾಧ್ಯವಿಲ್ಲ ಎಂದು ನಾನು ಕೇರಳದ ಜನರಿಗೆ ಹೇಳಲು ಬಂದಿದ್ದೇನೆ . ಎಲ್ಡಿಎಫ್ ಅಥವಾ ಯುಡಿಎಫ್ ಎರಡೂ ರಾಜ್ಯದಲ್ಲಿ ನಿಜವಾದ ಬದಲಾವಣೆಯನ್ನು ತರಲು ಸಾಧ್ಯವಿಲ್ಲದ ಕಾರಣ ಕೇರಳ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಮತ ಹಾಕಬೇಕು ಎಂದು ಅಮಿತ್ ಶಾ ಮನವಿ ಮಾಡಿದ್ದಾರೆ.