ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್- ರಷ್ಯಾ ಕದನದ ತೀವ್ರತೆ ಹೆಚ್ಚಾಗುತ್ತಿದ್ದು, ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ರಷ್ಯಾ ದಾಳಿಗೆ ಬಲಿಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪತ್ರಕರ್ತ ಆದಿತ್ಯ ರಾಜ್ ಕೌಲ್, ಉಕ್ರೇನ್ ನ ಖಾರ್ಕೀವ್ ನಿಂದ ಭಯಾನಕ ಸುದ್ದಿ ಹೊರಬಂದಿದ್ದು, ಖಾರ್ಕಿವ್ ಗವರ್ನರ್ ಹೌಸ್ ನಿಂದ ಆಹಾರ ತರಲು ಹೋದ ಸಮಯದಲ್ಲಿ ರಷ್ಯಾದ ಮಿಸೈಲ್ ಬಂದು ಕಟ್ಟಡಕ್ಕೆ ಅಪ್ಪಳಿಸಿದೆ. ಇದರ ಪರಿಣಾಮ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ಬಲಿಯಾಗಿದ್ದಾರೆ. ಈ ಬಗ್ಗೆ ಉಕ್ರೇನ್ ನಲ್ಲಿರುವ ಡಾ. ಪೂಜಾ ಮಾಹಿತಿ ನೀಡಿದ್ದು, ಸುಮಾರು 3-4 ಸಾವಿರ ಭಾರತೀಯರು ಇನ್ನೂ ಖಾರ್ಕಿವ್ ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿಸಿದರು.
ಗವರ್ನರ್ ಹೌಸ್ ಮೇಲೆ ನಡೆದ ಭಾರೀ ಕ್ಷಿಪಣಿ ದಾಳಿಯ ವಿಡಿಯೊವನ್ನು ಆದಿತ್ಯ ಹಂಚಿಕೊಂಡಿದ್ದಾರೆ.
ಈ ಸಾವನ್ನು ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ. ಮೃತ ವಿದ್ಯಾರ್ಥಿಯನ್ನು ನವೀನ್ ಶೇಖರಪ್ಪ ಜ್ಞಾನಗೌಡರ್ ಎಂದು ಗುರುತಿಸಲಾಗಿದೆ. ಇವರು ಕರ್ನಾಟಕದ ಹಾವೇರಿ ಜಿಲ್ಲೆಯ ಚಳಗೇರಿ ಮೂಲದವರು. ನವೀನ್ ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.
Terrible news from Kharkiv, Ukraine. One Indian medical student from Karnataka killed in Russian Missle attack on Kharkiv Governor House/City Hall when he had gone to get food. Indian Student Coordinator Dr.Pooja tells me from Kharkiv. 3000-4000 Indians still stranded in Kharkiv. pic.twitter.com/sqcxJxvy9H
— Aditya Raj Kaul (@AdityaRajKaul) March 1, 2022