ಸಿಂಗಾಪುರ ಚುನಾವಣೆಯಲ್ಲಿ ಭಾರತದವರಿಗೂ ಅವಕಾಶವಿದೆ: ಪ್ರಧಾನಿ ಲಾರೆನ್ಸ್‌ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇದೇ ವರ್ಷ ಸಿಂಗಾಪುರದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತದ ಮೂಲದವರಿಗೂ ಟಿಕೆಟ್‌ ನೀಡಲಾಗುವುದು ಎಂದು ಪ್ರಧಾನಿ ಲಾರೆನ್ಸ್‌ ವಾಂಗ್‌ ಹೇಳಿದ್ದಾರೆ.

ತಮಿಳು ಖಾಸಗಿ ಪತ್ರಿಕೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ವಾಂಗ್‌, ಸಿಂಗಾಪುರದಲ್ಲಿ ಭಾರತೀಯರು ಅಲ್ಪ ಪ್ರಮಾಣದಲ್ಲೇ ಇದ್ದರೂ, ಕೈಗಾರಿಕೆ, ವ್ಯವಹಾರ, ಸೇವಾ ವಲಯಕ್ಕೆ ಅವರ ಕೊಡುಗೆ ಅಪಾರವಾದದ್ದು ಎಂದು ಹೇಳಿದ್ದಾರೆ.

ಭಾರತ ಮೂಲದವರು ಸಿಂಗಾಪುರಕ್ಕೆ ನೀಡಿರುವ ಅನನ್ಯ ಕೊಡುಗೆಯನ್ನು ಗೌರವಿಸುವ ಸಲುವಾಗಿ, ಮುಂಬರುವ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ನೀಡಲು ನಿರ್ಧರಿಸಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!