ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀನಗರಕ್ಕೆ ನಾಲ್ಕು ಹಾಗೂ ಲೇಹ್ ಲಡಾಖ್ಗೆ ಪ್ರಯಾಣಿಸಬೇಕಿದ್ದ ಎರಡು ವಿಮಾನಗಳು ಹವಾಮಾನ ವೈಪರೀತ್ಯದಿಂದ ಇಂಡಿಗೋ ಏರ್ಲೈನ್ಸ್ ತಕ್ಷಣವೇ ರದ್ದುಗೊಳಿಸಿದೆ .
ಈ ಕುರಿತಂತೆ ಇಂದು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪ್ರಕಟಿಸಿದೆ.ಹವಾಮಾನದಲ್ಲಿ ಉಂಟಾದ ಭಾರೀ ಬದಲಾವಣೆಯಿಂದ ಶ್ರೀನಗರ ಮತ್ತು ಲೇಹ್ನಲ್ಲಿ ರನ್ವೇಯನ್ನು ಮುಚ್ಚಲಾಗಿದ್ದು, ಪ್ರಯಾಣಿಕರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಇಂಡಿಗೋ ಸಂಸ್ಥೆ, ಎಲ್ಲರಿಗೂ ಉಪಹಾರಗಳನ್ನು ಕೊಟ್ಟಿದೆ. ಇದರೊಟ್ಟಿಗೆ ಪ್ರಯಾಣಿಕರಿಗೆ ಸಂಪೂರ್ಣ ಮರುಪಾವತಿ ನೀಡಿ, ಪರ್ಯಾಯ ವ್ಯವಸ್ಥೆ ಕೂಡ ಮಾಡಿದೆ ಎಂದಿದೆ. .
‘ನಮ್ಮ ಎಲ್ಲಾ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ’ ಎಂದ ಇಂಡಿಗೋ ಸಂಸ್ಥೆ, ಕಣಿವೆಯಲ್ಲಿ ಹಿಮಪಾತದಿಂದಾಗಿ ಕಾಶ್ಮೀರದ ಶ್ರೀನಗರ ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ಭಾನುವಾರ ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.