ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಮಾಧ್ಯಮದ ಇನ್ಫ್ಲುಯೆನ್ಸರ್ ಶರ್ಮಿಷ್ಠಾ ಪನೋಲಿ ಅವರ ಬಂಧನವು ರಾಜಕೀಯ ವಲಯದಲ್ಲಿ ತೀವ್ರ ಕೋಲಾಹಲವನ್ನು ಸೃಷ್ಟಿಸಿದೆ.
ಎನ್ಡಿಎ ಮಿತ್ರಪಕ್ಷ ಮತ್ತು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ , ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಆಪರೇಷನ್ ಸಿಂದೂರ’ ಸಂದರ್ಭದಲ್ಲಿ ಮಾತನಾಡದಿದ್ದಕ್ಕಾಗಿ ಬಾಲಿವುಡ್ ನಟರನ್ನು ವಿರುದ್ಧ ಕಾನೂನು ವಿದ್ಯಾರ್ಥಿನಿ ಶರ್ಮಿಸ್ತಾ ಪನೋಲಿ ಪೋಸ್ಟ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕೋಲ್ಕತ್ತಾ ಪೊಲೀಸರು ವಿದ್ಯಾರ್ಥಿನಿಯನ್ನು ಬಂಧಿಸಿದ್ದರು. ವಿದ್ಯಾರ್ಥಿನಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಇದೀಗ ವಿದ್ಯಾರ್ಥಿಯ ಬಂಧನದ ಬಗ್ಗೆ ಜನ ಕಲ್ಯಾಣ ಸೇನಾ ನಾಯಕ ಪವನ್ ಕಲ್ಯಾಣ್ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಆಪರೇಷನ್ ಸಿಂದೂರ ಸಮಯದಲ್ಲಿ ಕಾನೂನು ವಿದ್ಯಾರ್ಥಿನಿ ಶರ್ಮಿಸ್ತಾ ಮಾತನಾಡಿದ್ದಳು. ಆಕೆಯ ಮಾತುಗಳಿಂದ ಕೆಲವರಿಗೆ ನೋವುಂಟಾಗಿರಬಹುದು. ಅದನ್ನರಿತು ಆಕೆ ತಪ್ಪು ಒಪ್ಪಿಕೊಂಡಿದ್ದಾಳೆ. ಕೊನೆಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ವೀಡಿಯೋವನ್ನು ಡಿಲೀಸ್ ಮಾಡಿದ್ದಾಳೆ. ಕ್ಷಮೆಯನ್ನೂ ಯಾಚಿಸಿದ್ದಾಳೆ.
ಆದ್ರೆರ್ ಪಶ್ಚಿಮ ಬಂಗಾಳ ಪೊಲೀಸರು ಶರ್ಮಿಸ್ತಾ ವಿರುದ್ಧ ತ್ವರಿತವಾಗಿ ಕ್ರಮಕೈಗೊಂಡರು. ಆದರೆ, ಟಿಎಂಸಿಯ ಚುನಾಯಿತ ನಾಯಕರು, ಸಂಸದರು ಸನಾತನ ಧರ್ಮವನ್ನು ಅಪಹಾಸ್ಯ ಮಾಡಿದಾಗ ಲಕ್ಷಾಂತರ ಜನರಲ್ಲಿ ಉಂಟಾದ ತೀವ್ರವಾದ ನೋವಿಗೆ ಸ್ಪಂದನೆ ಏನು? ಸನಾತನ ಧರ್ಮದ ಬಗ್ಗೆ ಮಾತನಾಡಿದವರ ಕ್ಷಮೆ ಎಲ್ಲಿದೆ? ಅವರ ತ್ವರಿತ ಬಂಧನ ಎಲ್ಲಾಯಿತು ಎಂದು ಪವನ್ ಕಲ್ಯಾಣ್ ಪ್ರಶ್ನಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರ ಹೇಳಿಕೆಗಳ ವೀಡಿಯೊವನ್ನು ಹಂಚಿಕೊಂಡ ಕಲ್ಯಾಣ್, “ದೇವನಿಂದನೆಯನ್ನು ಯಾವಾಗಲೂ ಖಂಡಿಸಬೇಕು! ಜಾತ್ಯತೀತತೆಯು ಕೆಲವರಿಗೆ ಗುರಾಣಿಯಲ್ಲ. ಇದು ದ್ವಿಮುಖ ರಸ್ತೆಯಾಗಿರಬೇಕು. ಪಶ್ಚಿಮ ಬಂಗಾಳ ಪೊಲೀಸರು, ರಾಷ್ಟ್ರವು ನೋಡುತ್ತಿದೆ. ಎಲ್ಲರಿಗೂ ನ್ಯಾಯಯುತವಾಗಿ ವರ್ತಿಸಿ.” ಎಂದು ಪವನ್ ಕಲ್ಯಾಣ್ ಕರೆ ನೀಡಿದ್ದಾರೆ.