ಹೊಸದಿಗಂತ ಹೊನ್ನಾವರ:
ಗರ್ಭಿಣಿ ಹಸುವಿನ ತಲೆ ಮತ್ತು ಕಾಲು ಕಡಿದು ಹತ್ಯೆ ಮಾಡಿದ ಅಮಾನವೀಯ ಘಟನೆ ತಾಲೂಕಿನ ಸಾಲ್ಕೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಂಡಾಕುಳಿಯಲ್ಲಿ ನಡೆದಿದೆ.
ಕೊಂಡಾಕುಳಿಯ ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಹಸುವನ್ನು ಶನಿವಾರ ಮೇವಿಗಾಗಿ ಹೊರಕ್ಕೆ ಬಿಟ್ಟಿದ್ದರು. ರಾತ್ರಿ ಹಸುವು ಮನೆಗೆ ಬರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ್ದಾರೆ. ರವಿವಾರ ಬೆಳಗ್ಗೆ ಹಸುವಿನ ತಲೆ ಕಡಿದು ಕಾಲು ತುಂಡರಿಸಿ ದೇಹದ ಭಾಗ ಮಾತ್ರ ತೆಗೆದುಕೊಂಡು ಹೊಗಿರುವುದು ಬೆಳಕಿಗೆ ಬಂದಿದೆ.
ಹಸುವಿನ ಹೊಟ್ಟೆಯನ್ನು ಸೀಳಿ ಕರುವನ್ನು ಸಹ ಹತ್ಯೆ ಮಾಡಲಾಗಿದೆ. ಇದನ್ನು ನೋಡಿದ ಮಾಲೀಕ ಕ್ರಷ್ಣ ಆಚಾರಿ ಹೊನ್ನಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪೋಲಿಸ್ ರು ಪ್ರಕರಣ ದಾಖಲಿಕೊಂಡು ತನಿಖೆ ಕೈಗೊಂಡಿದಗದಾರೆ.