ಹೊಸ ದಿಗಂತ ವರದಿ, ಕಲಬುರಗಿ:
ಗುಜರಾತ್,ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಾಳೆ ಮಂಗಳವಾರ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್,ನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಲಿ ಎಂದು ನಗರದ ಶರಣಬಸವೇಶ್ವರರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೇರವೇರಿಸಲಾಯಿತು.
ಈಗಾಗಲೇ ಲೀಗ್,ನ ಎಲ್ಲಾ ಪಂದ್ಯಗಳಲ್ಲಿ ಅದ್ಬುತ ಪ್ರದರ್ಶನ ನೀಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ) ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದು,ಇತ್ತ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಫೈನಲ್ ಗೆ ಲಗ್ಗೆಯಿಟ್ಟು ಬೆಂಗಳೂರಿನೊಂದಿಗೆ ಸೆಣಸಲಿದೆ.
ಬೆಂಗಳೂರಿನ ಪ್ರತಿ ಆಟಗಾರ ಫೈನಲ್ ಪಂದ್ಯದಲ್ಲಿ ರೋಚಕವಾದ ಪ್ರದರ್ಶನ ನೀಡುವ ಮೂಲಕ ೧೮ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್,ನ ಕಫ್ ನಮ್ಮದಾಗಲಿದೆ ಎಂದು ವಿಶೇಷ ಪೂಜೆ ಸಲ್ಲಿಸಿ ಈ ಸಲ ಕಪ್ ನಮ್ದೆ ಎಂದು ಅಭಿಮಾನಿಗಳು ಘೋಷಣೆ ಕೂಗಿದರು.
ಅತ್ಯುತ್ತಮ ಕ್ಷೇತ್ರರಕ್ಷಣೆ,ಕ್ಯಾಚ್,ಸ್ಟಂಪಿಂಗ್,ರನೌಟ್,ಬೌಲಿಂಗ್ತ್ ಮತ್ತು ಬೌಂಡರಿ,ಸಿಕ್ಸರ್,ಸ್ಪೋಟಕ ಬ್ಯಾಟಿಂಗ್,ವೇಗದ ಒಂದು/ಎರಡು ರನ್ ಗಳಿಕೆ ಗಳಿಗೆ ಗೌರವಯುತ ಬಹುಮಾನ ಘೋಷಿಸು ವುದೂ ಒಳ್ಳೆಯ ಫಲಿತಾಂಶಕ್ಕೆ ಪ್ರೇರಣೆ ಆಗುವುದು.