‘ಮೋದಿ ರಕ್ತನಾಳಗಳಲ್ಲಿ ಹರಿಯುತ್ತಿರುವುದು ರಕ್ತವಲ್ಲ, ಬದಲಾಗಿ ಬಿಸಿ ಸಿಂದೂರ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಪರೇಷನ್ ಸಿಂದೂರ ನಂತರ ಭಾರತವು ಪ್ರತಿಯೊಂದು ಭಯೋತ್ಪಾದಕ ದಾಳಿಗೂ ಪಾಕಿಸ್ತಾನ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.

“ಪಾಕಿಸ್ತಾನವು ಒಂದು ವಿಷಯವನ್ನು ಮರೆತಿದೆ: ಈಗ ಭಾರತ ಮಾತೆಯ ಸೇವಕ ಮೋದಿ ಇಲ್ಲಿ ತಲೆ ಎತ್ತಿ ನಿಂತಿದ್ದಾರೆ. ಮೋದಿಯವರ ಮನಸ್ಸು ತಂಪಾಗಿದೆ; ಅದು ತಂಪಾಗಿರುತ್ತದೆ, ಆದರೆ ಮೋದಿಯವರ ರಕ್ತ ಬಿಸಿಯಾಗಿರುತ್ತದೆ. ಈಗ ಮೋದಿಯವರ ರಕ್ತನಾಳಗಳಲ್ಲಿ ಹರಿಯುತ್ತಿರುವುದು ರಕ್ತವಲ್ಲ, ಬದಲಾಗಿ ಬಿಸಿ ಸಿಂದೂರ. ಈಗ ಪಾಕಿಸ್ತಾನದೊಂದಿಗೆ ವ್ಯಾಪಾರ ಅಥವಾ ಮಾತುಕತೆ ಇರುವುದಿಲ್ಲ. ಮಾತುಕತೆ ನಡೆದರೆ, ಅದು ಪಾಕ್ ಆಕ್ರಮಿತ ಕಾಶ್ಮೀರ ಬಗ್ಗೆ ಮಾತ್ರ” ಎಂದು ಪ್ರಧಾನಿ ಮೋದಿ ಬಿಕಾನೇರ್‌ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಹೇಳಿದ್ದಾರೆ.

“ಈಗ ಭಾರತ ಸ್ಪಷ್ಟಪಡಿಸಿದೆ… ಪ್ರತಿಯೊಂದು ಭಯೋತ್ಪಾದಕ ದಾಳಿಗೂ ಪಾಕಿಸ್ತಾನ ಭಾರೀ ಬೆಲೆ ತೆರಬೇಕಾಗುತ್ತದೆ. ಮತ್ತು ಈ ಬೆಲೆಯನ್ನು… ಪಾಕಿಸ್ತಾನದ ಸೇನೆಯೇ ಪಾವತಿಸಬೇಕಾಗುತ್ತದೆ… ಪಾಕಿಸ್ತಾನದ ಆರ್ಥಿಕತೆಯೂ ಪಾವತಿಸಬೇಕಾಗುತ್ತದೆ.. ಇದು ಕೇವಲ ಆಂದೋಲನವಲ್ಲ ಇದು ಬಲಿಷ್ಠ ಭಾರತದ ‘ರೌದ್ರ ರೂಪ’. ಇದು ಹೊಸ ಭಾರತ,” ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!