ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಪಾಕಿಸ್ತಾನವು ಭಾರತದೊಂದಿಗೆ ಶಾಂತಿಗೆ ಮುಕ್ತವಾಗಿದೆ ಎಂದು ಹೇಳಿದ್ದಾರೆ, ಕೆಲವು ದಿನಗಳ ಹಿಂದೆ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ್ದಕ್ಕೆ ರಕ್ತಪಾತದ ಬೆದರಿಕೆ ಹಾಕಿದ್ದ ಅವರು ಇದೀಗ ಯೂಟರ್ನ್ ಹೊಡೆದಿದ್ದಾರೆ.
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಅವರು, “ಭಾರತ ಶಾಂತಿಯ ಹಾದಿಯಲ್ಲಿ ನಡೆಯಲು ಬಯಸಿದರೆ, ಅವರು ಮುಷ್ಟಿ ಬಿಗಿಯದೆ ತೆರೆದ ಕೈಗಳೊಂದಿಗೆ ಬರಲಿ. ಅವರು ಸತ್ಯಗಳೊಂದಿಗೆ ಬರಲಿ, ಕಟ್ಟುಕಥೆಗಳೊಂದಿಗೆ ಅಲ್ಲ. ನಾವು ನೆರೆಹೊರೆಯವರಾಗಿ ಕುಳಿತು ಸತ್ಯವನ್ನು ಮಾತನಾಡೋಣ” ಎಂದು ಹೇಳಿದ್ದಾರೆ.
“ಅವರು ಹಾಗೆ ಮಾಡದಿದ್ದರೆ … ಪಾಕಿಸ್ತಾನದ ಜನರನ್ನು ಮಂಡಿಯೂರಿ ಕೂರಿಸಲಾಗುವುದಿಲ್ಲ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಲಿ. ಪಾಕಿಸ್ತಾನದ ಜನರು ಹೋರಾಡುವ ಸಂಕಲ್ಪವನ್ನು ಹೊಂದಿದ್ದಾರೆ, ನಾವು ಸಂಘರ್ಷವನ್ನು ಪ್ರೀತಿಸುತ್ತೇವೆ ಎಂಬ ಕಾರಣಕ್ಕಾಗಿ ಅಲ್ಲ, ಬದಲಾಗಿ ನಾವು ಸ್ವಾತಂತ್ರ್ಯವನ್ನು ಪ್ರೀತಿಸುತ್ತೇವೆ” ಎಂದು ತಿಳಿಸಿದ್ದಾರೆ.