ರಾಜ್ಯದಲ್ಲಿ ಬೇಸಿಗೆ ಆರಂಭವಾಗಿದೆ. ಮನೆಯಿಂದ ಹೊರಗೆ ಬಂದು ಮೇಲೆ ನೋಡೋಕೆ ಕಷ್ಟ ಎನ್ನುವಷ್ಟು ಬಿಸಿಲು ಚುಚ್ಚುವಂತಿದೆ. ಈ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ, ಸಮ್ಮರ್ನಲ್ಲಿ ಆರೋಗ್ಯ ಕಾಪಾಡೋಕೆ ಈ ಕೆಲಸಗಳನ್ನು ಮಾಡಬೇಡಿ..
ಪ್ಯಾಕೇಜ್ ಜ್ಯೂಸ್, ಕೋಲಾ ಹಾಗೂ ಡ್ರಿಂಕ್ಸ್ಗಳನ್ನು ಅವಾಯ್ಡ್ ಮಾಡಿ
ಸೂರ್ಯನ ನೇರ ಕಿರಣಗಳಿಂದ ದೂರ ಇಡಿ, ಮಧ್ಯಾಹ್ನ ಮನೆ ಅಥವಾ ಇಂಡೋರ್ನಲ್ಲಿರಿ
ಜಂಕ್ ಫುಡ್ ಎಣ್ಣೆಯಲ್ಲಿ ಕರಿದ ಆಹಾರ ಹಾಗೂ ಹೆವಿ ಮಸಾಲೆ ಪದಾರ್ಥ ಬೇಡ
ಕೋಲ್ಡ್ ವಾಟರ್ಗೆ ಅಡಿಕ್ಟ್ ಆಗಬೇಡಿ, ಫ್ರಿಡ್ಜ್ ನೀರಿನ ಬದಲು ಮಡಿಕೆ ನೀರನ್ನು ಅಭ್ಯಾಸ ಮಾಡಿ.
ಮಕ್ಕಳಿಂದ ದೊಡ್ಡವರವರೆಗೂ ಸನ್ಸ್ಕ್ರೀನ್ ಹಚ್ಚುವುದನ್ನು ಮಿಸ್ ಮಾಡಬೇಡಿ.
ಕಾರ್ ಅಥವಾ ಬಂದ್ ಆದ ವೆಹಿಕಲ್ನಲ್ಲಿ ಮಕ್ಕಳನ್ನು ಬಿಡಬೇಡಿ
ಲೂಸ್ ಆದ ಕಾಟನ್ ಬಟ್ಟೆಗಳನ್ನು ಹಾಕಿಕೊಳ್ಳಿ
ದಿನಕ್ಕೆ ನಾಲ್ಕ ಬಾರಿ ಕಾಫಿ ಕುಡಿಯೋದನ್ನು ನಿಲ್ಲಿಸಿ, ಎಳನೀರು, ನಿಂಬೆ ಜ್ಯೂಸ್ ಸೇವಿಸಿ



