ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದ ಪಾಣಿಪತ್ನಲ್ಲಿ ಜನನಾಯಕ ಜನತಾ ಪಕ್ಷದ ನಾಯಕ ರವೀಂದರ್ ಮಿನ್ನಾರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಮಿನ್ನಾರ ಸೋದರ ಸಂಬಂಧಿಯಾದ ವ್ಯಕ್ತಿಯೇ ಗುಂಡಿನ ದಾಳಿ ನಡೆಸಿದ್ದಾನೆ. ಈತ ಇನ್ನೊಬ್ಬ ವ್ಯಕ್ತಿಯ ಮೇಲೂ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶುಕ್ರವಾರ ಸಂಜೆ ಪಾಣಿಪತ್ನಲ್ಲಿ ಜೆಜೆಪಿ ನಾಯಕ ರವೀಂದರ್ ಮಿನ್ನಾ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.ಆರೋಪಿಗಳನ್ನು ಬಂಧಿಸಲು ಐದು ತಂಡಗಳನ್ನು ರಚಿಸಲಾಗಿದೆ ಎಂದು ಪಾಣಿಪತ್ ಪೊಲೀಸರು ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ.
ಕಳೆದ ವಾರ ಸೋನಿಪತ್ನಲ್ಲಿ ಬಿಜೆಪಿ ನಾಯಕ ಸುರೇಂದ್ರ ಜವಾಹರ ಹತ್ಯೆಯ ನಂತರ ಈ ಘಟನೆ ನಡೆದಿದೆ. ಸೋನಿಪತ್ ಪೊಲೀಸರ ಪ್ರಕಾರ, ಭೂ ವಿವಾದದಿಂದಾಗಿ ಮಾರ್ಚ್ 14 ರಂದು ಜವಾಹರ ಅವರನ್ನು ಅವರ ನೆರೆಹೊರೆಯವರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.